ಚಿತ್ರದುರ್ಗ: ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಸಿಗಲ್ಲ, ಸಾರಿಗೆ ವ್ಯವಸ್ಥೆ, ವಿದ್ಯುತ್ ಸಂಪರ್ಕ ಇಲ್ಲದೆ ಬೇಸತ್ತಿರುವ ಯರೇಹಳ್ಳಿ ಗ್ರಾಮಸ್ಥರು 11 ಗಂಟೆಯಾದ್ರೂ ಮತದಾನ ಮಾಡಲು ಬಾರದೇ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಗ್ರಾಮಕ್ಕೆ ಮತಯಾಚಿಸಲು ಅಭ್ಯರ್ಥಿಗಳೊಂದಿಗೆ ಈ ಹಿಂದೆ ಮೂಲ ಭೂತ ಸೌಕರ್ಯ ಒದಗಿಸಿ ಎಂದು ಕೇಳಿಕೊಂಡಿದ್ದರು. ಅಲ್ಲದೆ ಗುರುವಾರ ರಸ್ತೆ ತಡೆ ಮಾಡಿ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ಆದ್ರೆ ಇದ್ಯಾವುದಕ್ಕೂ ಅಭ್ಯರ್ಥಿಗಳು ಕಿವಿ ಕೊಡದ ಹಿನ್ನಲೆ ಜಿಲ್ಲಾಡಳಿತ, ಜನಪ್ರತಿನಿಧಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದಾರೆ.