ವೆಸ್ಟ್ ಇಂಡೀಸ್: ಟಿ-20 ವಿಶ್ವಕಪ್ನ (T 20 World Cup) ಫೈನಲ್ ಪಂದ್ಯದ ಅಂತಿಮ 4 ಓವರ್ಗಳಲ್ಲಿ ಪಂದ್ಯದ ದಿಕ್ಕನ್ನೆ ಬದಲಾಯಿಸಿ ಭಾರತ (India) ಟ್ರೋಫಿ ಮುಡಿಗೇರಿಸಿಕೊಂಡಿದೆ.
ಭಾರತೀಯರು ನೀಡಿದ 177 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಆರಂಭದಲ್ಲಿ ಕೊಂಚ ಮುಗ್ಗರಿಸಿದರೂ ಕ್ವಿಂಟನ್ ಡಿ ಕಾಕ್ (39 ರನ್, 31 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಟ್ರಿಸ್ಟಾನ್ ಸ್ಟಬ್ಸ್ (31 ರನ್, 21 ಎಸೆತ, 3 ಬೌಂಡರಿ, 1 ಸಿಕ್ಸರ್)ರ ಚೇತರಿಕೆಯ ಜೊತೆಯಾಟದಿಂದ ಸುಧಾರಿಸಿಕೊಂಡಿತು.
ಹೆನ್ರಿಕ್ ಕ್ಲಾಸೆನ್ರ (52 ರನ್, 27 ಎಸೆತ, 2 ಬೌಂಡರಿ, 5 ಸಿಕ್ಸರ್) ಸ್ಫೋಟಕ ಆಟ ಭಾರತೀಯ ಬೌಲರ್ಗಳಿಗೆ ತಲೆನೋವಾಗಿ ಪರಿಣಮಿಸಿತು. ಕುಲದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ರ ಅಂತಿಮ ಓವರ್ಗಳಲ್ಲಿ ತಲಾ 14 ಹಾಗೂ 28 ರನ್ ಸಿಡಿಸುವ ಮೂಲಕ ಸೌತ್ ಆಫ್ರಿಕಾ ತಂಡದ ಗೆಲುವನ್ನು ಖಾತ್ರಿ ಪಡಿಸಿದ್ದರು. ಆದರೆ 17ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ, ಕ್ಲಾಸಿನ್ರ ವಿಕೆಟ್ ಪಡೆಯುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. 18ನೇ ಓವರ್ನಲ್ಲಿ ಬೂಮ್ರಾ 2 ರನ್ ನೀಡಿ ಮಾರ್ಕೊ ಜಾನ್ಸೆನ್ರ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮತ್ತೇ ಗೆಲುವಿನ ಆಸೆ ಚಿಗುರಿಸಿದರು. ಅಂತಿಮವಾಗಿ ಭಾರತ 7 ರನ್ಗಳ ಗೆಲುವು ಸಾಧಿಸಿದೆ.
ಭಾರತದ ಪರ ಹಾರ್ದಿಕ್ ಪಾಂಡ್ಯ 3 ವಿಕೆಟ್, ಅರ್ಷದೀಪ್ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್, ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.