Sunday, July 7, 2024
Homeಕ್ರೈಂHathras stampede : ಹತ್ರಾಸ್‌ ದುರ್ಘಟನೆಯ ಬಗ್ಗೆ ಚಿಂತಿಸಲು ಪ್ರಧಾನಿ ಮೋದಿಗೆ ಟೈಮಿಲ್ಲ - ಪ್ರಿಯಾಂಕ್‌...

Hathras stampede : ಹತ್ರಾಸ್‌ ದುರ್ಘಟನೆಯ ಬಗ್ಗೆ ಚಿಂತಿಸಲು ಪ್ರಧಾನಿ ಮೋದಿಗೆ ಟೈಮಿಲ್ಲ – ಪ್ರಿಯಾಂಕ್‌ ಉವಾಚ

ದೆಹಲಿ: ಹತ್ರಾಸ್ ಕಾಲ್ತುಳಿತ ಪ್ರಕರಣದ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಮರುಕಹೊಂದದೇ ಸಾಮಾನ್ಯವಾಗಿ ವರ್ತಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

“ಇದೊಂದು ಅತ್ಯಂತ ದುರದೃಷ್ಟಕರ ಘಟನೆ, ಆದರೆ ಅದಕ್ಕಿಂತ ಮುಖ್ಯವಾಗಿ, ಈ ದುರ್ಘಟನೆಯ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವರ್ತನೆ ಸರಿಯಿಲ್ಲ.  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಯವಿದೆ. ಆದರೆ ಆ ಸಮಯವನ್ನು ಅವರು ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಅಪಹಾಸ್ಯ ಮಾಡಲು ಬಳಸಿದ್ದಾರೆ ಎಂದು ವಾಗ್ದಾಳಿ ನೇಸಿದರು.

ಆದರೆ ದೇಶವನ್ನು ಕಾಡುತ್ತಿರುವ ಎಲ್ಲಾ ನೈಜ ಸಮಸ್ಯೆಗಳಿಗೆ ಮೋದಿ ಬಳಿ ಸಮಯವಿಲ್ಲ, ಅದು ರೈಲ್ವೆ ಅಪಘಾತವಾಗಲಿ ಅಥವಾ ಕಾಲ್ತುಳಿತವಾಗಲಿ ಸಹಾನುಭೂತಿ ತೋರಿಸಲು ಸಂಪೂರ್ಣವಾಗಿ ಮೋದಿ ವಿಫಲರಾಹಿದ್ದಾರೆ ಎಂದು ಪ್ರಿಯಾಂಕ್ ಆರೋಪಿಸಿದ್ದಾರೆ. ಅವನ ದಂತಗೋಪುರದಲ್ಲಿ ಸಂತೋಷವಾಗಿದೆ.

 

ಹೆಚ್ಚಿನ ಸುದ್ದಿ