ಹಾಸನ : ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿ ಇಂದು ರಿಲೀಸ್ ಆಗಿರುವ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಲೋಕಸಭೆಯ ಅಧಿವೇಶ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ.
ಜೈಲಿನಿಂದ ಹೊರ ಬಂದ ಕೂಡಲೇ ಸುದ್ದಿಗೋಷ್ಠಿ ನಡೆಸಿ, ರೇಪ್ ಕೇಸ್ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬ ವಿಚಾರವನ್ನು ಶೀಘ್ರದಲ್ಲೇ ತಿಳಿಯಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸದ್ದು ಮಾಡಿದ್ದ ದೇವರಾಜೇಗೌಡ, ಪ್ರಧಾನಿ ಅವರನ್ನು ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಿ ಹಾಸನಕ್ಕೆ ಆಹ್ವಾನಿಸಿ ಬೃಹತ್ ಸಮಾವೇಶ ಮಾಡುವೆ. ಆ.15ರವರೆಗೂ ಕಾಯಿರಿ,. ಬಂಧನ ಪ್ರಕರಣ ಮುಂತಾದ ವಿಚಾರಗಳ ಕುರಿತಾದ ನಿಜಾಂಶಗಳು ತಿಳಿಯಲಿವೆ ಎಂದು ಸುಳಿವು ನೀಡಿದರು.