Sunday, July 7, 2024
Homeಕ್ರೈಂCRIME : ವಿದ್ಯಾರ್ಥಿಗೆ ಬಾಸುಂಡೆ ಏಟು - ಶಾಲೆಗೆ ಬೀಗ ಹಾಕಿದ ಪೋಷಕರು..!

CRIME : ವಿದ್ಯಾರ್ಥಿಗೆ ಬಾಸುಂಡೆ ಏಟು – ಶಾಲೆಗೆ ಬೀಗ ಹಾಕಿದ ಪೋಷಕರು..!

ಗದಗ : ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಬೆತ್ತದೇಟು ನೀಡಿ ದಂಡಿಸುವ ಪ್ರವೃತ್ತಿ ಕಡಿಮೆಯಾಗಿದ್ದರೂ, ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿಯೊಬ್ಬಳು ವಿದ್ಯಾರ್ಥಿಯೋರ್ವನಿಗೆ ಬಾಸುಂಡೆ ಗದಗದ ಗಜೇಂದ್ರಗಢ ತಾಲೂಕಿನಲ್ಲಿ ನಡೆದಿದೆ.

ಕಾಲಕಾಲೇಶ್ವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಯ ಶಿಕ್ಷಕಿ ರೇಣುಕಾ ಎಂಬುವವರು ವಿಧ್ಯಾರ್ಥಿ ಏನೋ ತಪ್ಪು ಮಾಡಿದ ಎಂಬ ಕಾರಣಕ್ಕೆ ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. 

ಶಾಲೆ ಬಿಟ್ಟ ನಂತರ ಬಾಲಕ ಮನೆಯಲ್ಲಿ ಹೋಗಿ ಶಿಕ್ಷಕಿಯ ದರ್ಪದ ಬಗ್ಗೆ ತಿಳಿಸಿದ್ದಾನೆ. ಇದರಿಂದ ಸಿಟ್ಟಾದ ಪೋಷಕರು ಏಕಾಏಕಿ ಶಾಲೆಗೆ ನುಗ್ಗಿ ಬೀಗ ಹಾಕಿದ್ದು, ಶಿಕ್ಷಕಿಯನ್ನು ಅಮಾನತು ಮಾಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. 

ಜೊತೆಗೆ ಶಿಕ್ಷಕಿಯ ಹಿಂಸಾಚಾರಕ್ಕೆ ವಿಧ್ಯಾರ್ಥಿಗಳು ಶಾಲೆಯನ್ನು ಬಹಿಷ್ಕರಿಸಿದ್ದು, ಸ್ಥಳಕ್ಕೆ ಸಾರ್ವಜನಿಕ ಶಿಕ್ಷಣದ ಉಪ ನಿರ್ದೇಶಕರು ಬರಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. 

ಹೆಚ್ಚಿನ ಸುದ್ದಿ