Sunday, July 7, 2024
Homeಕ್ರೈಂVIRAL NEWS : ಗಜರಾಜನ ಅಟ್ಟಹಾಸ : ಕ್ಷಣಾರ್ಧದಲ್ಲಿ ಮಾವುತ ಅಪ್ಪಚ್ಚಿ - VIDEO 

VIRAL NEWS : ಗಜರಾಜನ ಅಟ್ಟಹಾಸ : ಕ್ಷಣಾರ್ಧದಲ್ಲಿ ಮಾವುತ ಅಪ್ಪಚ್ಚಿ – VIDEO 

ಕೇರಳದಲ್ಲಿ ಸಾಕಾನೆಯೊಂದು ಮಾವುತನನ್ನು ತುಳಿದು ಸಾಯಿಸಿರುವ ಭಯಾನಕ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,  ಬೆಚ್ಚಿಬೀಳಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕೇರಳದ ಕಲ್ಲರ್​ನಲ್ಲಿ ಆನೆ ಮಾವುತನನ್ನು ತುಳಿದು ಸಾಯಿಸಿದ್ದು,  ಮೃತರನ್ನು ಬಾಲಕೃಷ್ಣನ್​ (62) ಎಂದು ಗುರುತಿಸಲಾಗಿದೆ. ದೃಶ್ಯದಲ್ಲಿ ಕಂಡಂತೆ ಆನೆ ಮಾವುತ ಅಂಕುಶದಿಂದ ಸಲಗದ ಕಾಲಿಗೆ ಹೊಡೆದಿದ್ದಾನೆ. 

ಇದರಿಂದ ಕೋಪಗೊಂಡ ಆನೆ ಮಾವುತನನ್ನು ನೆಲಕ್ಕೆ ಹಾಕಿ ತನ್ನ ಕಾಲಿನಿಂದ ತುಳಿದು ಸೋಂಡಿಲಿನಿಂದ ಎತ್ತಿ ಕೆಳಕ್ಕೆಸೆಯುತ್ತದೆ. ತಕ್ಷಣ ಮಾವುತನನ್ನು ಕಾಪಾಡಲು ಇನ್ನೊಬ್ಬ ವ್ಯಕ್ತಿ ಆಗಮಿಸಿದ್ದು ಅಷ್ಟರಲ್ಲಾಗಲೇ ಮಾವುತ ಸಾವನ್ನಪ್ಪಿದ್ದ ಎನ್ನಲಾಗಿದೆ.

ಸದ್ಯ ಮೃತ ಮಾವುತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. 

ಹೆಚ್ಚಿನ ಸುದ್ದಿ