Sunday, July 7, 2024
Homeಟಾಪ್ ನ್ಯೂಸ್BREAKING : ಆಘಾತಕಾರಿ ಸುದ್ದಿ.. ಡೆಂಘಿಗೆ ಆರೋಗ್ಯಾಧಿಕಾರಿಯೇ ಬಲಿ!

BREAKING : ಆಘಾತಕಾರಿ ಸುದ್ದಿ.. ಡೆಂಘಿಗೆ ಆರೋಗ್ಯಾಧಿಕಾರಿಯೇ ಬಲಿ!

ಮೈಸೂರು : ಸಿಲಿಕಾನ್ ಸಿಟಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೆಂಘಿ ಜ್ವರ ಪ್ರಕರಣಗಳು ಹೆಚ್ಚಳವಾಗುತ್ತಿವೆ.

ಇನ್ನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ಸಮುದಾಯ ಆರೋಗ್ಯಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಂದ್ರ (32) ಎಂಬುವವರು ಇಂದು ಡೆಂಘಿಗೆ ಬಲಿಯಾಗಿದ್ದಾರೆ. ಇದು ಜಿಲ್ಲೆಯಲ್ಲಿ ಡೆಂಘಿ ಜ್ವರಕ್ಕೆ ಮೊದಲ ಸಾವಿನ ಪ್ರಕರಣ ಎಂದು ವರದಿಯಾಗಿದೆ.

ಡೆಂಘಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ನಾಗೇಂದ್ರ ಅವರು ಚಿಕಿತ್ಸೆ ಫಲಿಸದೇ ಇಂದು ಅಸುನೀಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 162 ಸಕ್ರಿಯ ಡೆಂಘಿ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಹೆಚ್ಚಿನ ಸುದ್ದಿ