ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕ್ರೂರವಾಗಿ ಹಿಂಸಿಸಿ ಅಮಾನುಷವಾಗಿ ಹತ್ಯೆಗೈದಿರುವ ಪ್ರಕರಣದಲ್ಲಿ ದರ್ಶನ್ ಮತ್ತು ಅವನ ಸಂಗಡಿಗರು ಜೈಲು ಪಾಲಾಗಿದ್ದಾರೆ. ಇದೇ ವೇಳೆ ಅನಾಮಿಕರೊಬ್ಬರು ದರ್ಶನ್ ಕೃತ್ಯದ ಬಗ್ಗೆ ಮತ್ತೊಬ್ಬರೊಡನೆ ವಿವರಗಳನ್ನು ಹಂಚಿಕೊಂಡಿರುವ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.
ಅನಾಮಿಕ ವ್ಯಕ್ತಿ ದರ್ಶನ್ ನೀಡಿದ ಚಿತ್ರಹಿಂಸೆ ಮತ್ತು ರಾಕ್ಷಸೀ ಕೃತ್ಯಗಳ ಬಗ್ಗೆ ಇಂಚಿಂಚಾಗಿ ವಿವರಣೆ ನೀಡಿದ್ದಾರೆ. ಇವರು ಪೊಲೀಸ್ ಅಧಿಕಾರಿಯೋ, ಪೋಸ್ಟ್ ಮಾರ್ಟಂ ನಡೆಸಿದ ವೈದ್ಯರೋ ಅಥವಾ ತನಿಖಾ ವಿಭಾಗದ ಸಿಬ್ಬಂದಿಯೋ ಎಂದು ತಿಳಿದುಬಂದಿಲ್ಲವಾದರೂ ಈ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿದೆ.