ಬೆಂಗಳೂರು:ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಜೈಲು ಸೇರಿ ಇಂದಿಗೆ 12 ನೇ ದಿನವಾಗಿದೆ. ಅಲ್ಲದೇ ಜೈಲಿನ ಗ್ರಂಥಾಲಯದಿಂದ ಕೆಲ ಪುಸ್ತಕ ತರಿಸಿಕೊಂಡು , ತಡ ರಾತ್ರಿವರೆಗೂ ಓದಿದ್ದಾರೆ. ಬಿಡುವಿನ ವೇಳೆಯಲ್ಲೂ ಏಕಾಂತ ಕಳೆಯಲು ದರ್ಶನ್ ಪುಸ್ತಕದ ದಾಸರಾಗಿದ್ದಾರೆ ಎನ್ನಲಾಗಿದೆ. ಮುಂಜಾನೆ ಬೇಗ ಎದ್ದು ವಾಕ್ ಮಾಡಿ ವ್ಯಾಯಾಮ ಮಾಡಿದ ದರ್ಶನ್ ಮತ್ತೆ ಪುಸ್ತಕವನ್ನೇ ಹಿಡಿದಿದ್ದಾರೆ.
ಜೈಲು ಸೇರಿ ಬಹಳ ದಿನವಾದ ಹಿನ್ನಲೆ ದಾಸ ಜೈಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ ಎನ್ನಲಾಗಿದೆ. ನಿನ್ನೆ ರಾತ್ರಿ ಜೈಲಿನ ಮೆನು ಪ್ರಕಾರ ಚಪಾತಿ ಊಟ ಸೇವಿಸಿದ್ದಾರೆ.
ಕೊಲೆ ಆರೋಪ ಕೇಳಿ ಬಂದ ಬಳಿಕ ದರ್ಶನ್ ತಾಯಿ, ತಮ್ಮ ಹಲವು ವಾರ ದರ್ಶನ್ ಬಳಿ ಸುಳಿದಿರಲಿಲ್ಲ. ಎರಡು ದಿನಗಳ ಹಿಂದೆ ತಾಯಿ ಬೇಟಿ ನಂತರ ದರ್ಶನ್ ಕೊಂಚ ನಿರಾಳರಾಗಿದ್ದಾರೆ.