ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನ ವಿಶೇಷ ಕೊಠಡಿಯಲ್ಲಿ ರುವ ಹಿನ್ನಲೆ ವಿಶೇಷ ವ್ಯವಸ್ಥೆಗಳಿವೆ ಎನ್ನಲಾಗಿದೆ.
ದರ್ಶನ್ ಜೈಲಿನಲ್ಲಿ ಟಿವಿ ವ್ಯವಸ್ಥೆ ಕೂಡ ಇದ್ದು, ಹಿಂದಿ ಸಿನಿಮಾ ಹಾಗೂ ಕೆಲವು ಸ್ಪೋರ್ಟ್ಸ್ ಚಾನೆಲ್ಗಳನ್ನೂ ವೀಕ್ಷಣೆ ಮಾಡಿ ದ್ದಾರೆ ಎನ್ನಲಾಗಿದೆ. ಆದರೆ, ತಮ್ಮ ವಿರುದ್ಧದ ಆರೋಪದ ಸುದ್ದಿಗಳನ್ನು ನಿರಾಸಕ್ತಿ ವಹಿಸಿದ್ದಾರೆ. ಜೈಲಿನ ಬ್ಯಾರಕ್ ಆವರಣದಲ್ಲಿ ಆಗಾಗ ವಾಕಿಂಗ್ ಮಾಡುತ್ತಿರುವ ದರ್ಶನ್ ಸಹ ಕೈದಿಗಳು, ಸಿಬ್ಬಂದಿ ಜತೆಗೆ ಮಾತನಾಡಲು ಒಲವು ತೋರಿಲ್ಲ. ಆದರೆ ತಮ್ಮನ್ನು ನೋಡಲು ಬರುವ ಅಭಿಮಾನಿಗಳು ಸೇರಿ ಯಾರ ಭೇಟಿ ಗೂ ಅವರು ಒಪ್ಪಿಗೆ ಸೂಚಿಸುತ್ತಿಲ್ಲ ಎನ್ನಲಾಗುತ್ತಿದೆ.
ನಿನ್ನೆ ದರ್ಶನ್ ಭೇಟಿಗೆ ಬಂದ ವಿಶೇಷ ಚೇತನ ಯುವತಿಗೂ ಪೊಲೀಸರು ಅವಕಾಶ ನೀಡಿಲ್ಲ ಎಂದು ವರದಿಯಾಗಿದೆ.