ರಾಮನಗರ : ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಅವರ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದಾರೆ.
ಇನ್ನು ಚನ್ನಪಟ್ಟಣವನ್ನು ಪ್ರತಿನಿಧಿಸುತ್ತಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಲೋಕ ಸಮರದಲ್ಲಿ ಗೆದ್ದು ಈಗ ಕೇಂದ್ರ ಸಚಿವರಾಗಿದ್ದು. ಹೆಚ್ಡಿಕೆ ಗೆಲುವಿನಿಂದ ತೆರವಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರು ಕಣಕ್ಕೆ ಇಳಿದು ಮತ್ತೆ ಕಮ್ ಬ್ಯಾಕ್ ಮಾಡ್ತಾರೆ ಎನ್ನಲಾಗುತಿತ್ತು. ಆದರೆ ತಾವು ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸಲ್ಲ. ಈಗಾಗಲೇ ಸೋತ ಮೇಲೆ ತಾವು ಮತ್ತೆ ಸ್ಪರ್ಧಿಸಿದರೆ, ಜನ ನಗ್ತಾರೆ ಎಂದು ಹೇಳಿದ್ದರು. ಆ ಮೂಲಕ ತಾವು ಚನ್ನಪಟ್ಟಣದ ಅಭ್ಯರ್ಥಿಯಲ್ಲ ಎಂಬ ಸಂದೇಶ ರವಾನಿಸಿದ್ದರು.
ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮೊಂದಿಗೆ ಸದಾ ಇರುತ್ತೇನೆ. #DKSuresh pic.twitter.com/AmA0LHxAI8
— DK Suresh (@DKSureshINC) June 27, 2024
ಇದೀಗ ಡಿಕೆಸು ಅವರು ತಮ್ಮ ‘X’ ಖಾತೆಯಲ್ಲಿ ಅವರ ಭಾಷಣದ ವಿಡಿಯೋವೊಂದನ್ನು ಶೇರ್ ಮಾಡಿ, “ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮೊಂದಿಗೆ ಸದಾ ಇರುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಅವರ ಈ ಬರಹವು ಚುನಾವಣಾ ಕಣದಿಂದ ಸಂಪೂರ್ಣವಾಗಿ ಡಿಕೆಸು ಅವರು ಹಿಂದೆ ಸರಿದೇ ಬಿಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ ಇನ್ನೊಂದೆಡೆ , ಈಗಾಗಲೇ ಚನ್ನಪಟ್ಟಣ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಡಿಕೆಸು ಅವರ ಅಣ್ಣ ಡಿಸಿಎಂ ಡಿಕೆ.ಶಿವಕುಮಾರ್, ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚದುರಂಗದಾಟದಲ್ಲಿ ಮತ್ತೊಮ್ಮೆ ಡಿಕೆ ಬ್ರದರ್ಸ್ ಟ್ವಿಸ್ಟ್ ಕೊಟ್ಟರೂ ಅಚ್ಚರಿ ಇಲ್ಲ ಎಂಬ ಲೆಕ್ಕಾಚಾರದ ಚರ್ಚೆಗಳು ಈಗ ಫ್ರೆಶ್ ಆಗಿ ಶುರುವಾಗಿವೆ.