Sunday, July 7, 2024
Homeಟಾಪ್ ನ್ಯೂಸ್Channapattana By Election : ಡಿ.ಕೆ.ಸುರೇಶ್​​​ಗೆ ಬಂತಾ ರಾಜಕೀಯ ವೈರಾಗ್ಯ?

Channapattana By Election : ಡಿ.ಕೆ.ಸುರೇಶ್​​​ಗೆ ಬಂತಾ ರಾಜಕೀಯ ವೈರಾಗ್ಯ?

ರಾಮನಗರ : ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಅವರ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದಾರೆ.

ಇನ್ನು ಚನ್ನಪಟ್ಟಣವನ್ನು ಪ್ರತಿನಿಧಿಸುತ್ತಿದ್ದ ಹೆಚ್​​​.ಡಿ.ಕುಮಾರಸ್ವಾಮಿ ಅವರು ಲೋಕ ಸಮರದಲ್ಲಿ ಗೆದ್ದು ಈಗ ಕೇಂದ್ರ ಸಚಿವರಾಗಿದ್ದು. ಹೆಚ್​​ಡಿಕೆ ಗೆಲುವಿನಿಂದ ತೆರವಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಡಿ.ಕೆ.ಸುರೇಶ್​​ ಅವರು ಕಣಕ್ಕೆ ಇಳಿದು ಮತ್ತೆ ಕಮ್ ಬ್ಯಾಕ್ ಮಾಡ್ತಾರೆ ಎನ್ನಲಾಗುತಿತ್ತು. ಆದರೆ ತಾವು ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸಲ್ಲ. ಈಗಾಗಲೇ ಸೋತ ಮೇಲೆ ತಾವು ಮತ್ತೆ ಸ್ಪರ್ಧಿಸಿದರೆ, ಜನ ನಗ್ತಾರೆ ಎಂದು ಹೇಳಿದ್ದರು. ಆ ಮೂಲಕ ತಾವು ಚನ್ನಪಟ್ಟಣದ ಅಭ್ಯರ್ಥಿಯಲ್ಲ ಎಂಬ ಸಂದೇಶ ರವಾನಿಸಿದ್ದರು.

ಇದೀಗ ಡಿಕೆಸು ಅವರು ತಮ್ಮ ‘X’ ಖಾತೆಯಲ್ಲಿ ಅವರ ಭಾಷಣದ ವಿಡಿಯೋವೊಂದನ್ನು ಶೇರ್ ಮಾಡಿ, “ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮೊಂದಿಗೆ ಸದಾ ಇರುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಅವರ ಈ ಬರಹವು ಚುನಾವಣಾ ಕಣದಿಂದ ಸಂಪೂರ್ಣವಾಗಿ ಡಿಕೆಸು​ ಅವರು ಹಿಂದೆ ಸರಿದೇ ಬಿಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ ಇನ್ನೊಂದೆಡೆ , ಈಗಾಗಲೇ ಚನ್ನಪಟ್ಟಣ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಡಿಕೆಸು ಅವರ ಅಣ್ಣ ಡಿಸಿಎಂ ಡಿಕೆ.ಶಿವಕುಮಾರ್, ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚದುರಂಗದಾಟದಲ್ಲಿ ಮತ್ತೊಮ್ಮೆ ಡಿಕೆ ಬ್ರದರ್ಸ್​​ ಟ್ವಿಸ್ಟ್​ ಕೊಟ್ಟರೂ ಅಚ್ಚರಿ ಇಲ್ಲ ಎಂಬ ಲೆಕ್ಕಾಚಾರದ ಚರ್ಚೆಗಳು ಈಗ ಫ್ರೆಶ್​​ ಆಗಿ ಶುರುವಾಗಿವೆ.

ಹೆಚ್ಚಿನ ಸುದ್ದಿ