Sunday, July 7, 2024
Homeಕ್ರೈಂBIG BREAKING : ನಟ ದರ್ಶನ್​​ & ಗ್ಯಾಂಗ್​​​ಗೆ ಜೈಲೇ ಗತಿ…ಕೋರ್ಟ್ ಆದೇಶ

BIG BREAKING : ನಟ ದರ್ಶನ್​​ & ಗ್ಯಾಂಗ್​​​ಗೆ ಜೈಲೇ ಗತಿ…ಕೋರ್ಟ್ ಆದೇಶ

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಆರೋಪ ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ ಕೇಸ್​​​ ನ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಜು.18ರವರೆಗೆ ವಿಸ್ತರಿಸಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್​ ಆದೇಶಿಸಿದೆ.

ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನ ವಿಚಾರಣೆ ನಡೆಸಿದ ಕೋರ್ಟ್​ A2 ಆರೋಪಿ ದರ್ಶನ್​, A1 ಆರೋಪಿ ಪವಿತ್ರಗೌಡ ಮತ್ತು ಉಳಿದ ಆರೋಪಿಗಳನ್ನು ಪರಪ್ಪನ ಅಗ್ರಹಾರ ಹಾಗೂ ತುಮಕೂರು ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು.

ದರ್ಶನ್ ಆಪ್ತೆ ಹಾಗೂ ಪ್ರಕರಣದ A1 ಆರೋಪಿ ಪವಿತ್ರಗೌಡಗೆ ಮೃತ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎಂಬ ಆರೋಪವಿತ್ತು. ಹೀಗಾಗಿ ಆತನನ್ನು ಸಂಚು ಮಾಡಿ ಚಿತ್ರದುರ್ಗದಿಂದ ಅಪಹರಿಸಿ, ಬೆಂಗಳೂರಿನ ಪಟ್ಟಣಗೆರೆ ಶೆಡ್​​​​ ಕರೆತಂದು ‘ಡಿ’ ಗ್ಯಾಂಗ್​ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂಬ ಆರೋಪವಿದೆ. ಜೂ.9ರಂದು ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು.

ಹೆಚ್ಚಿನ ಸುದ್ದಿ