Sunday, July 7, 2024
Homeಟಾಪ್ ನ್ಯೂಸ್Congress vs Bjp: ಬಿಜೆಪಿ ನಾವಿಕನಿಲ್ಲದೆ ಮುಳುಗುತ್ತಿರುವ ಹಡಗು – ಕಾಂಗ್ರೆಸ್‌ ಲೇವಡಿ

Congress vs Bjp: ಬಿಜೆಪಿ ನಾವಿಕನಿಲ್ಲದೆ ಮುಳುಗುತ್ತಿರುವ ಹಡಗು – ಕಾಂಗ್ರೆಸ್‌ ಲೇವಡಿ

ಬಿಜೆಪಿ ಈಗ ನಾವಿಕನಿಲ್ಲದೆ ಮುಳುಗುತ್ತಿರುವ ಹಡಗು ಎಂದು ಸ್ವತಃ ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿವೈ ವಿಜಯೇಂದ್ರ ಹಾಗೂ ವಿರೋಧ ಪಕ್ಷ ನಾಯಕನಾಗಿ ಆರ್‌ ಅಶೋಕ ಫೇಲ್‌ ಆಗಿದ್ದಾರೆ ಎಂದು ಕಾಂಗ್ರೆಸ್‌ ಟ್ವಿಟರ್‌ ನಲ್ಲಿ ಪೋಸ್ಟ್‌ ಮೂಲಕ ಟೀಕಿಸಿದೆ.

ಕುರುಡನ ಹೆಗಲ ಮೇಲೆ ಕುಂಟನ ಸವಾರಿಯಂತಿರುವ ಬಿಜೆಪಿಯ ನಾಯಕತ್ವದಿಂದ 66ರಲ್ಲಿರುವ ಸೀಟುಗಳು ಮುಂದೆ 33ಕ್ಕೆ ಬರುವುದು ಖಚಿತವಾಗಿದೆ. ಬಿಜೆಪಿಯಲ್ಲಿ ನಾಯಕರು ಸೃಷ್ಟಿಯಾಗುವುದಿಲ್ಲ, ಗಾಂಪರು ಸೃಷ್ಟಿಯಾಗುತ್ತಾರೆ ಎನ್ನುವುದಕ್ಕೆ ಸದಾನಂದ ಗೌಡರ ಪತ್ರ ಪುಷ್ಠಿಕರಿಸುತ್ತದೆ. ಪಕ್ಷ ಶುದ್ದೀಕರಣ ಮಾಡಬೇಕೆನ್ನುವ ಸದಾನಂದಗೌಡರ ಆಸೆಯನ್ನು ಯಾವುದರಿಂದ ಈಡೇರಿಸುತ್ತೀರಿ? ಗೋ ಮೂತ್ರದಿಂದಲೋ? ಅಥವಾ ಡೆಟಾಲ್ ನಿಂದಲೋ? ಎಂದು ಪ್ರಶ್ನಿಸುವ ಮುಖೇನ ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ.

ನಮ್ಮ ಪಕ್ಷ ಇಷ್ಟು ಹಾಳಾಗಲು ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳದಿರೋದು ಕಾರಣ. ನಾನು ಪಕ್ಷದ ಅಧ್ಯಕ್ಷ ಆಗಿದ್ದಾಗ ಜನಾರ್ದನ ರೆಡ್ಡಿ, ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಸಸ್ಪೆಂಡ್ ಮಾಡಿದ್ದೆ. ಇಂದು ನಮ್ಮ ಪಕ್ಷದಲ್ಲಿ ಆ ಕೆಲಸ ಆಗುತ್ತಿಲ್ಲ ಎಂದು ಮಾಜಿ ಸಿಎಂ ಡಿ. ವಿ ಸದಾನಂದಗೌಡ ಹೇಳಿದ್ದರು.

ಹೆಚ್ಚಿನ ಸುದ್ದಿ