ಬೆಂಗಳೂರು: ಲೋಕಸಭೆ ಅಧಿವೇಶನದಲ್ಲಿ ರಾಹುಲ್ ಗಾಂಧಿ ಅವರ ನೇರ ದಾಳಿಗೆ ಪ್ರಧಾನಿ ಮೋದಿ ಅವರು ತತ್ತರಿಸಿ ಹೋಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಕಾಂಗ್ರೆಸ್, ಹಿಂದೂ ಧರ್ಮ ಎಂದಿಗೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ, ಆದರೆ ಹಿಂದೂ ಧರ್ಮವನ್ನು ಗುತ್ತಿಗೆ ತೆಗೆದುಕೊಂಡವರಂತೆ ಧರ್ಮದ ಹೆಸರಲ್ಲಿ ರಾಜಕೀಯ ಮಾಡುವವರು ಹಿಂಸೆಗೆ ಪ್ರಚೋದಿಸಿ ಹಿಂದೂ ಧರ್ಮಕ್ಕೆ ಅಪಮಾನ ಎಸಗುತ್ತಿದ್ದಾರೆ.
ಈ ಮಾತಿಗೆ ಹೌಹಾರಿ ಹೆಗಲು ಮುಟ್ಟಿ ನೋಡಿಕೊಂಡಿರುವ ಬಿಜೆಪಿಗರು ಗೊಳಾಡುತ್ತಿದ್ದಾರೆ.ನೈಜ ಹಿಂದೂ ಎಂದಿಗೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಆದರೆ ಬಿಜೆಪಿ 24/7 ಹಿಂಸೆ, ದ್ವೇಷ, ಭಯವನ್ನು ಸ್ಥಾಪಿಸಲು ಹವಣಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅಲ್ಲದೇ ರಾಹುಲ್ ಗಾಂಧಿ ಅವರ ಮಾತನ್ನು ತಿರುಚಲು ಬಿಜೆಪಿ ಯತ್ನಿಸುತ್ತಿದೆ.
ಆದರೆ ಅವರ ಹಳೆಯ ಚಾಳಿಗೆ ಭಾರತೀಯರು ಇಂದು ತಲೆದೂಗುವುದಿಲ್ಲ ಎಂಬುದನ್ನು ಅಯೋದ್ಯೆಯ ಮತದಾರರೇ ನಿರೂಪಿಸಿದ್ದಾರೆ ಎಂದು ಕಾಂಗ್ರೆಸ್ ಟ್ವೀಟಿಸಿದೆ.
ಸಂಸತ್ ನಲ್ಲಿ ಶ್ರೀ @RahulGandhi ಅವರ ಡೈರೆಕ್ಟ್ ಅಟ್ಯಾಕ್ ಗೆ ಪ್ರಧಾನಿ ಮೋದಿ ಅವರು ತತ್ತರಿಸಿ ಹೋಗಿದ್ದಾರೆ.
ಇಂದು ರಾಹುಲ್ ಅವರ ಪದಗಳ ದಾಳಿಗೆ ಕೇಂದ್ರ ಸರ್ಕಾರ ತತ್ತರಿಸಿ ಹೋಗಿದೆ,
ಹಿಂದೂ ಧರ್ಮ ಎಂದಿಗೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ, ಆದರೆ ಹಿಂದೂ ಧರ್ಮವನ್ನು ಗುತ್ತಿಗೆ ತೆಗೆದುಕೊಂಡವರಂತೆ ಧರ್ಮದ ಹೆಸರಲ್ಲಿ ರಾಜಕೀಯ ಮಾಡುವವರು…
— Karnataka Congress (@INCKarnataka) July 2, 2024