Sunday, July 7, 2024
Homeಟಾಪ್ ನ್ಯೂಸ್BJP vs Congress : ರಾಹುಲ್‌ ದಾಳಿಗೆ ಮೋದಿ ತತ್ತರಿಸಿ ಹೋಗಿದ್ದಾರೆ - ರಾಜ್ಯ...

BJP vs Congress : ರಾಹುಲ್‌ ದಾಳಿಗೆ ಮೋದಿ ತತ್ತರಿಸಿ ಹೋಗಿದ್ದಾರೆ – ರಾಜ್ಯ ಕಾಂಗ್ರೆಸ್‌ ಲೇವಡಿ!

ಬೆಂಗಳೂರು: ಲೋಕಸಭೆ ಅಧಿವೇಶನದಲ್ಲಿ ರಾಹುಲ್ ಗಾಂಧಿ ಅವರ ನೇರ ದಾಳಿಗೆ ಪ್ರಧಾನಿ ಮೋದಿ ಅವರು ತತ್ತರಿಸಿ ಹೋಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಕಾಂಗ್ರೆಸ್, ಹಿಂದೂ ಧರ್ಮ ಎಂದಿಗೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ, ಆದರೆ ಹಿಂದೂ ಧರ್ಮವನ್ನು ಗುತ್ತಿಗೆ ತೆಗೆದುಕೊಂಡವರಂತೆ ಧರ್ಮದ ಹೆಸರಲ್ಲಿ ರಾಜಕೀಯ ಮಾಡುವವರು ಹಿಂಸೆಗೆ ಪ್ರಚೋದಿಸಿ ಹಿಂದೂ ಧರ್ಮಕ್ಕೆ ಅಪಮಾನ ಎಸಗುತ್ತಿದ್ದಾರೆ.

ಈ ಮಾತಿಗೆ ಹೌಹಾರಿ ಹೆಗಲು ಮುಟ್ಟಿ ನೋಡಿಕೊಂಡಿರುವ ಬಿಜೆಪಿಗರು ಗೊಳಾಡುತ್ತಿದ್ದಾರೆ.ನೈಜ ಹಿಂದೂ ಎಂದಿಗೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಆದರೆ ಬಿಜೆಪಿ 24/7 ಹಿಂಸೆ, ದ್ವೇಷ, ಭಯವನ್ನು ಸ್ಥಾಪಿಸಲು ಹವಣಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಅಲ್ಲದೇ ರಾಹುಲ್ ಗಾಂಧಿ ಅವರ ಮಾತನ್ನು ತಿರುಚಲು ಬಿಜೆಪಿ ಯತ್ನಿಸುತ್ತಿದೆ.
ಆದರೆ ಅವರ ಹಳೆಯ ಚಾಳಿಗೆ ಭಾರತೀಯರು ಇಂದು ತಲೆದೂಗುವುದಿಲ್ಲ ಎಂಬುದನ್ನು ಅಯೋದ್ಯೆಯ ಮತದಾರರೇ ನಿರೂಪಿಸಿದ್ದಾರೆ ಎಂದು ಕಾಂಗ್ರೆಸ್ ಟ್ವೀಟಿಸಿದೆ.

ಹೆಚ್ಚಿನ ಸುದ್ದಿ