ಬೆಂಗಳೂರು: ನಗರದಲ್ಲಿ ಕಾಲೇಜು ಸೆಕ್ಯೂರೆಟಿ ಗಾರ್ಡ್ ಮೇಲೆ ವಿದ್ಯಾರ್ಥಿ ಹಲ್ಲೆ ನಡೆಸಿ ಕೊಲೆಗೈದ ಭೀಕರ ದೃಶ್ಯ ಸಿಸಿಟಿವಿ ಸೆರೆಯಾಗಿದ್ದು, ಈ ದೃಶ್ಯ ಮೈ ಜುಮ್ ಎನಿಸುವಂತಿದೆ.
ಅಮೃತಹಳ್ಳಿಯ ಸಿಂಧಿ ಕಾಲೇಜು ಸಿಬ್ಬಂದಿಯ ಮೇಲೆ ವಿದ್ಯಾರ್ಥಿ ಭಾರ್ಗವ್ ಏಕಾಏಕಿ ದಾಳಿ ನಡೆಸಿ ಕೊಲೆ ಮಾಡಿದ ದೃಶ್ಯ ಹೊರಗೆ ಬಂದಿದೆ.
ಹಾಡುಹಗಲೇ ಹತ್ತಾರು ಜನರಿದ್ದಾಗಲೇ ಏಕಾಏಕಿ ಕಾಲೇಜು ಗೇಟಿನ ಮೂಲಕ ಪ್ರವೇಶಿಸಿ ಚಾಕುವಿನಿಂದ ವಿದ್ಯಾರ್ಥಿ ಭಾರ್ಘವ್ ದಾಳಿ ನಡೆಸಿದ್ದ.
ಭಾರ್ಗವ್ ಮನಸ್ಸೋ ಇಚ್ಚೇ ಇರಿದಿದ್ದರಿಂದ ಸೆಕ್ಯೂರೆಟಿ ಗಾರ್ಡ್ ಜೈ ಕಿಶೋರ್ ರಾಮ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ರಕ್ಷಣೆಗೆ ಸಹ ಸಿಬ್ಬಂದಿ ಓಡಿಬಂದು ಬಲವಾಗಿ ಹಿಡಿದುಕೊಂಡರೂ ಪಟ್ಟು ಬಿಡದೇ ಡಿಸಿಪ್ಲೀನ್ ಇಂಚಾರ್ಜ್ ಜೈ ಕಿಶೋರ್ ರಾಮ್ ಎದೆಗೆ ಇರಿದೇ ಬಿಟ್ಟಿದ್ದಾನೆ.
ಭಾರ್ಗವ್ ನಡೆಸಿದ ಹದಿನೈದು ಸೆಕೆಂಡ್ ದಾಳಿಗೆ ಸ್ಥಳದಲ್ಲೇ ಜೈ ಕಿಶೋರ್ ರಾಮ್ ಪ್ರಾಣಪಕ್ಷಿ ಹಾರಿ ಹೋಗಿದೆ. ತೀವ್ರ ರಕ್ತಸ್ರಾವದಿಂದ ಸಹೋದ್ಯೋಗಿಗಳ ಕಣ್ಣಮುಂದೆಯೇ ಪ್ರಾಣ ಬಿಟ್ಟಿದ್ದಾರೆ.