ಬೆಂಗಳೂರು: ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ, ಸಿಎಂ ಸಿದ್ದರಾಮಯ್ಯ ಅವರು ಭ್ರಷ್ಟಾಚಾರದ ಪಿತಾಮಹ, ಕಲೆಕ್ಷನ್ ಮಾಸ್ಟರ್, ಅಂದು ಅರ್ಕಾವತಿ ಹಗರಣ, ಇಂದು ಮೂಡಾ ಹಗರಣ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಅಲ್ಲದೇ, ಹಗರಣಗಳೇ ನನ್ನ ಪ್ರಾಣ, ಹಗರಣಗಳೇ ನನ್ನ ಧ್ಯಾನ, ಹಗರಣಗಳೇ ನನ್ನ ಜೀವನ ಎನ್ನುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಸದ್ಯ ಸಿಎಂ ಸಿದ್ದರಾಮಯ್ಯ ಅವರು ಮೂಡಾ ಹಗರಣ, ವಾಲ್ಮಿಕಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನಲೆ ಬಿಜೆಪಿ ಈ ರೀತಿ ಛೇಡಿಸುತ್ತಿದೆ.
ಹಗರಣಗಳೇ ನನ್ನ ಪ್ರಾಣ
ಹಗರಣಗಳೇ ನನ್ನ ಧ್ಯಾನ
ಹಗರಣಗಳೇ ನನ್ನ ಜೀವನ
ಎನ್ನುತ್ತಿದ್ದಾರೆ ಸಿಎಂ ಸಿದ್ದರಾಮಯ್ಯನವರು!!! pic.twitter.com/tRLdZ5tGEz— BJP Karnataka (@BJP4Karnataka) July 3, 2024