Sunday, July 7, 2024
HomeಬೆಂಗಳೂರುCM Siddaramaiah: ಶಾಸಕರ ಸಮಸ್ಯೆ ಆಲಿಸಲು ಮುಂದಾದ ಸಿಎಂ : ಭೇಟಿಗೆ ಟೈಂ ಫಿಕ್ಸ್!

CM Siddaramaiah: ಶಾಸಕರ ಸಮಸ್ಯೆ ಆಲಿಸಲು ಮುಂದಾದ ಸಿಎಂ : ಭೇಟಿಗೆ ಟೈಂ ಫಿಕ್ಸ್!

ಬೆಂಗಳೂರು: ರಾಜ್ಯ ಕಾಂಗ್ರೆಸ್ ಒಳಗಿನ ಆತಂರಿಕ ಕಲಹ ಶಮನ ಮಾಡಲು ಹಾಗೂ ಅಭಿವೃದ್ಧಿಗೆ ಹಣ ನೀಡದ ಹಿನ್ನಲೆ ಆಕ್ರೋಶಗೊಂಡಿರುವ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಪ್ರತೀ ಗುರುವಾರವನ್ನು ಶಾಸಕರ ಭೇಟಿಗೆ ಮೀಸಲಿಟ್ಟಿದ್ದಾರೆ. ಆ ಮೂಲಕ ಹೊಸ ಸಂಪ್ರದಾಯಕ್ಕೆ ಸಿಎಂ ನಾಂದಿ ಹಾಡಿದ್ದಾರೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಂತಾಗುತ್ತದೆ ಎಂಬುದು ಸಿಎಂ ಲೆಕ್ಕಾಚಾರವಾಗಿದೆ. ಇಲ್ಲಿ ಕಾಂಗ್ರೆಸ್ ಮಾತ್ರವಲ್ಲದೇ, ಎಲ್ಲಾ ಪಕ್ಷಗಳ ಶಾಸಕರಿಗೂ ಸಿಎಂ ಭೇಟಿಗೆ ಮುಕ್ತ ಅವಕಾಶ ನೀಡಲಾಗಿದೆ.

ಇಂದಿನಿಂದಲೇ ಶಾಸಕರ ಭೇಟಿಗೆ ಸಮಯ ನಿಗದಿ ಮಾಡಿರುವ ಸಿಎಂ ಸಿದ್ದರಾಮಯ್ಯ, ಸಂಜೆ 4 ಗಂಟೆಯಿಂದ 6 ಗಂಟೆವರೆಗೆ ಪಕ್ಷಾತೀತವಾಗಿ ಶಾಸಕರ ಭೇಟಿಗೆ ಮುಂದಾಗಿದ್ದಾರೆ.

ಹೆಚ್ಚಿನ ಸುದ್ದಿ