ನವದೆಹಲಿ : ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ಯುನೈಟೆಡ್ ಮಾಸ್ಟರ್ಸ್ ವೇಟ್ ಲೆಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಐರೆನ್ ಲೇಡಿ ಆಫ್ ಇಂಡಿಯಾ ಖ್ಯಾತಿಯ ನಾಡಿನ ಖುದ್ಸಿಯಾ ನಜೀರ್ ಅವರನ್ನು ಸಿಎಂ ಸಿದ್ದರಾಮಯ್ಯ ಅಭಿನಂದಿಸಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ತಮ್ಮನ್ನು ಭೇಟಿಯಾದ ಖುದ್ಸಿಯಾ ಅವರಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಸಿಎಂ ಹುರುದುಂಬಿಸಿ ಹಾರೈಸಿದರು.
ಜೂ.19 ರಿಂದ 23ರವರೆಗೆ ನಡೆದ ಈ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಖುದ್ಸಿಯಾ ಅವರು ಮೂಲತಃ ಬಂಗಾರಪೇಟೆಯವರು. ಅಲ್ಲದೇ ಅವರು ಬೆಂಗಳೂರಿನ ಕೆಎಸ್ಆರ್ಟಿಸಿಯ ಪ್ರಧಾನ ಕಚೇರಿಯಲ್ಲಿ ನೌಕರರೂ ಆಗಿದ್ದಾರೆ.