Sunday, July 7, 2024
Homeಕ್ರೈಂRenukaswamy Murder Case : ಜೈಲಲ್ಲಿರುವ ನಟ ದರ್ಶನ್‌ & ಗ್ಯಾಂಗ್​​​​ಗೆ ಭಾರೀ ಸಂಕಷ್ಟ!

Renukaswamy Murder Case : ಜೈಲಲ್ಲಿರುವ ನಟ ದರ್ಶನ್‌ & ಗ್ಯಾಂಗ್​​​​ಗೆ ಭಾರೀ ಸಂಕಷ್ಟ!

ಬೆಂಗಳೂರು : ನಟ ದರ್ಶನ್ & ಗ್ಯಾಂಗ್ ನಿಂದ ರೇಣುಕಾಸ್ವಾಮಿಯ ಹತ್ಯೆ ಆರೋಪದ ಪ್ರಕರಣದಲ್ಲಿ ಈಗಾಗಲೇ 17 ಆರೋಪಿಗಳು ಜೈಲು ಸೇರಿದ್ದಾರೆ. ಆದರೆ ಪ್ರಕರಣದ A2 ಆರೋಪಿ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಹೌದು, ಪಟ್ಟಣಗೆರೆ ಶೆಡ್ನಲ್ಲಿ ಜೂ.8ರಂದು ರೇಣುಕಾಸ್ವಾಮಿ ಮರ್ಡರ್ ಆಗಿತ್ತು. ಪ್ರಕರಣವನ್ನು ಮುಚ್ಚಿ ಹಾಕಲು, ಶವವನ್ನು ಸಾಗಿಸಲು, ಸಾಕ್ಷ್ಯಾ ನಾಶಪಡಿಸಲು, ಕೇಸ್ನಲ್ಲಿ ತಮ್ಮ ಹೆಸರು ಬಾರದಂತೆ ನೋಡಿಕೊಂಡು ಪೊಲೀಸರಿಗೆ ಶರಣಾಗುವಂತೆ ದರ್ಶನ್ ತಮ್ಮ ಗ್ಯಾಂಗ್ನ ಸಹಚರರಿಗೆ ಸೂಚಿಸಿದ್ದರು ಎಂಬ ಆರೋಪವಿದೆ.

ಈ ಎಲ್ಲಾ ಕೆಲಸಕ್ಕಾಗಿ ದರ್ಶನ್ 30 ಲಕ್ಷ ರೂಪಾಯಿಯನ್ನೂ ನೀಡಿದ್ದರು ಎನ್ನಲಾಗಿದೆ. ಪೊಲೀಸರ ವಿಚಾರಣೆ ಚುರುಕು ಪಡೆದುಕೊಳ್ಳುತ್ತಿದ್ದಂತೆ ದರ್ಶನ್ ಮನೆ, ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಆರೋಪಿಗಳಿಂದಲೂ ಸೇರಿ ಒಟ್ಟು 70 ಲಕ್ಷ ರೂಪಾಯಿಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಹೀಗಾಗಿ, ಕಾನೂನು ಪ್ರಕಾರ ಒಬ್ಬರು 10 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಇಟ್ಟುಕೊಂಡರೆ, ಅದಕ್ಕೆ ಸೂಕ್ತ ಕಾರಣ, ದಾಖಲೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ಹಣದ ಮೂಲದ‌ ಬಗ್ಗೆ ತನಿಖೆ ನಡೆಸುವಂತೆ ಐಟಿ ಇಲಾಖೆಗೆ ಪತ್ರ ಬರೆದು ಪೊಲೀಸರು ಮನವಿ ಮಾಡಿದ್ದಾರೆ. ಇದರಿಂದ ದರ್ಶನ್ & ಟೀಂಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಹೆಚ್ಚಿನ ಸುದ್ದಿ