Sunday, July 7, 2024
Homeಟಾಪ್ ನ್ಯೂಸ್VIRAL NEWS : ಜಾತ್ರೆಯಲ್ಲಿ ಎತ್ತು ತಿವಿದು ಯುವಕನ ಕರುಳೇ ಆಚೆ ಬಂತು..! - VIDEO

VIRAL NEWS : ಜಾತ್ರೆಯಲ್ಲಿ ಎತ್ತು ತಿವಿದು ಯುವಕನ ಕರುಳೇ ಆಚೆ ಬಂತು..! – VIDEO

ವಿಜಯಪುರ : ಸಾಂಪ್ರದಾಯಿಕ ಹಬ್ಬದ ಆಚರಣೆ ವೇಳೆ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕನೋರ್ವನನ್ನು ಹೋರಿ ಎತ್ತಿ ಬಿಸಾಕಿದ ಪರಿಣಾಮ ಯುವಕನ ಕರುಳು ಆಚೆ ಬಂದಿರುವ ದಾರುಣ ಘಟನೆ ವಿಜಯಪುರದಲ್ಲಿ ನಡೆದಿದೆ. 

ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಕರಿ ಹರಿಯುವ ಕಾರ್ಯಕ್ರಮವನ್ನು ಜಲ್ಲಿಕಟ್ಟು ಮಾದರಿಯಲ್ಲೇ ನಡೆಸಲಾಗುತ್ತೆ. ಇಂದು ನಡೆದ ಕರಿ ಹರಿಯುವ ವೇಳೆ ಸ್ಥಳದಲ್ಲೇ ನಿಂತಿದ್ದ ಯುವಕನನ್ನು ಹೋರಿಯೊಂದು ಕೊಂಬಿನಿಂದ ತಿವಿದು ಎಸೆದಿದೆ.

ಇದರ ಪರಿಣಾಮವಾಗಿ ಯುವಕನ ಕರುಳು ಆಚೆ ಬಂದಿದ್ದು, ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಯುವಕನಿಗೆ ಚಿಕಿತ್ಸೆ ಮುಂದುವರೆದಿದ್ದು ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಗ್ರಾಮದ ಅಗಸಿ, ಪಂಚಾಯಿತಿ ಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಓಡಾಡುವ ಎತ್ತುಗಳಿಂದ 2023ರಲ್ಲಿ, 2022ರಲ್ಲಿ ಐದಾರು ಜನ ಗಾಯಗೊಂಡಿದ್ದರೆ, 2021 ರಲ್ಲಿ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದ ಎನ್ನಲಾಗಿದೆ. 

ಹೆಚ್ಚಿನ ಸುದ್ದಿ