Sunday, July 7, 2024
Homeಕ್ರೈಂMurder : ರಾಡ್‌ ನಿಂದ ಹಲ್ಲೆಗೈದು ಯುವಕನ ಬರ್ಬರ ಹತ್ಯೆ!

Murder : ರಾಡ್‌ ನಿಂದ ಹಲ್ಲೆಗೈದು ಯುವಕನ ಬರ್ಬರ ಹತ್ಯೆ!

ಬೆಂಗಳೂರು: ನಗರದ ಅಬ್ಬಿಗೆರೆಯ ನಿರ್ಜನ ಪ್ರದೇಶದಲ್ಲಿ ಯುವಕನೊಬ್ಬನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಅಬ್ಬಿಗೆರೆ ನಿವಾಸಿ ಮಂಜುನಾಥ್ (17) ಕೊಲೆಯಾದ ಯುವಕ.

ಶನಿವಾರ ತಡರಾತ್ರಿ ಮಂಜುನಾಥ್ ಒಬ್ಬನೇ ಇದ್ದ ಸಂದರ್ಭ ನೋಡಿ ದುಷ್ಕರ್ಮಿಗಳು ಏಕಾಏಕಿ ಮಂಜುನಾಥ್ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ದಿಢೀರ್ ದಾಳಿಯಿಂದ ತಪ್ಪಿಸಿಕೊಳ್ಳಲಾರದೇ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮುಂಜಾನೆ ಶವ ನೋಡಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಮೇಲ್ನೊಟಕ್ಕೆ ಪ್ರೀತಿಯ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗುತ್ತಿದೆ.ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

 

ಹೆಚ್ಚಿನ ಸುದ್ದಿ