ಬಾರ್ಬಡೋಸ್: ಭಾರೀ ಚಂಡಮಾರುತದ ಹಿನ್ನಲೆ ಟಿ-೨೦ ವಿಶ್ವಕಪ್ ವಿಜೇತ ಭಾರತ ತಂಡ ವೆಸ್ಟ್ ಇಂಡಿಸ್ ನಲ್ಲಿ ಸಿಲುಕಿಕೊಂಡಿದ್ದು, ಇಂದು ಭಾರತಕ್ಕೆ ಮರಳುವ ಭಾಗ್ಯ ದಕ್ಕಿದೆ.
ಕಳೆದ ೨ ದಿನಗಳಿಂದ ಅಲ್ಲೇ ಬೀಡು ಬಿಟ್ಟಿದ್ದ ಟೀಂ ಇಂಡಿಯಾ ಸಿಲುಕಿರುವ ಇಂದು ಚಾರ್ಟರ್ಡ್ ಫ್ಲೈಟ್ನಲ್ಲಿ ದೆಹಲಿಗೆ ತೆರಳಲಿದೆ ಎಂದು ವರದಿಯಾಗಿದೆ.
ಸಂಜೆ ೬ ಗಂಟೆಗೆ ಬಾರ್ಬಡೋಸ್ ನಿಂದ ದೆಹಲಿಗೆ ವಿಮಾನ ಬುಕ್ ಮಾಡಲಾಗಿದೆ.
ಬಿಸಿಸಿಐ ಚಾರ್ಟರ್ಡ್ ವಿಮಾನದ ವ್ಯವಸ್ಥೆ ಮಾಡಿದ್ದು ದೆಹಲಿಗೆ ಬುಧವಾರ ತಂಡವು ಬಂದಿಳಿಯುವ ಸಾಧ್ಯತೆಯಿದೆ.
ವೆಸ್ಟ್ ಇಂಡಿಸ್ ನಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಚಂಡಮಾರುತ ಉಂಟಾಗಿ ಅಪಾರ ಹಾನಿ ಸಂಭವಿಸಿತ್ತು. ಈ ಹಿನ್ನಲೆ ಅಲ್ಲಿ ಲಾಕ್ ಡೌನ್ ಮಾಡಲಾಗಿತ್ತು