ಬಾರ್ಬಡೋಸ್: ಟಿ- ಟ್ವೆಂಟಿ ವಿಶ್ವ ಕಪ್ ಗೆದ್ದು ಭಾರತಕ್ಕೆ ಕಿರೀಟ ತಂದು ಕೊಟ್ಟ ಭಾರತ ಕ್ರಿಕೆಟ್ ತಂಡ ಸದ್ಯ ಅಪಾಯದಲ್ಲಿದೆ. ಇದರ ಜತೆಗೆ ಭಾರತದಿಂದ ವಿಶ್ವಕಪ್ ನೇರ ಪ್ರಸಾರ ಹಾಗೂ ಸುದ್ದಿ ವರದಿ ಮಾಡಲು ಹೋಗಿದ್ದ ಮಾಧ್ಯಮ ಪ್ರತಿನಿಧಿಗಳು ಕೂಡ ಅಪಾಯದಲ್ಲಿದ್ದಾರೆ.
ಇದಕ್ಕೆ ಕಾರಣ ಅಲ್ಲಿ ಉಂಟಾಗಿರುವ ಚಂಡ ಮಾರುತ ಸಹಿತ ರಣ ಭೀಕರ ಮಳೆ.
ಬಲವಾದ ಗಾಳಿ ಮತ್ತು ಮಳೆಯೊಂದಿಗೆ ಚಂಡಮಾರುತವು ವೆಸ್ಟ್ ಇಂಡೀಸ್ ನ್ನು ಹಿಂಡಿ ಹಿಪ್ಪೆ ಮಾಡಿದೆ. ಭಾರೀ ಚಂಡಮಾರುತವು ಅಪ್ಪಳಿಸಿರುವ ಕಾರಣ ಬಾರ್ಬಡೋಸ್ ಸೇರಿ ಬಹುತೇಕ ನಗರಗಳ ಸ್ಥಿತಿ ಕ್ಷಣ ಕ್ಷಣಕ್ಕೂ ಬಿಗಡಾಯಿಸಿದೆ.
ಜಲಮಾರ್ಗ, ವಾಯುಮಾರ್ಗ ಸಂಪೂರ್ಣ ಸ್ಥಗಿತಗೊಂಡಿದ್ದು, ವಿಮಾನಗಳ ಹಾರಾಟ ಹಾಗೂ ಹಡಗುಗಳ ಸಂಚಾರ ಸಂಪೂರ್ಣ ಸ್ತಬ್ದವಾಗಿದೆ. ವಿದ್ಯುತ್ ಮತ್ತು ನೀರಿನ ಪೂರೈಕೆ ಕೂಡ ಅಸ್ತವ್ಯಸ್ತವಾಗಿದ್ದು, ಆಹಾರ, ನೀರಿಗೂ ಹಾಹಾಕಾರ ಶುರುವಾಗಿದೆ.
ಒಟ್ಟಿನಲ್ಲಿ ಟಿ- ಟ್ವೆಂಟಿ ಗೆದ್ದ ಟೀಂ ಇಂಡಿಯಾ ತವರಿನ ಸಂಭ್ರಮಾಚರಣೆಗೆ ಇನ್ನಷ್ಟು ದಿನ ಕಾಯಬೇಕಿದೆ.
#WATCH | Barbados: Electricity and water supply affected as hurricane hits the country with strong winds and rain.
Team India and media from India stuck in Barbados as all flights cancelled because of the curfew. pic.twitter.com/NswPxkaWig
— ANI (@ANI) July 2, 2024