Sunday, July 7, 2024
Homeಟಾಪ್ ನ್ಯೂಸ್BJP - JDS : ರಾಜ್ಯದಲ್ಲಿ ಎಚ್‌ಡಿಕೆಗೇ ಹೆಚ್ಚಿನ ಪ್ರಾಶಸ್ತ್ಯ - ಮುನಿಸಿಕೊಂಡರೇ ಬಿವೈವಿ?

BJP – JDS : ರಾಜ್ಯದಲ್ಲಿ ಎಚ್‌ಡಿಕೆಗೇ ಹೆಚ್ಚಿನ ಪ್ರಾಶಸ್ತ್ಯ – ಮುನಿಸಿಕೊಂಡರೇ ಬಿವೈವಿ?

ಬೆಂಗಳೂರು: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಯಂದ್ರ ವರಿಷ್ಠರ ಭೇಟಿಗೆ ದೆಹಲಿಗೆ ತೆರಳಿದ್ದು ಅವರ ಈ ನಡೆ ಬಿಜೆಪಿ ವಲಯದಲ್ಲಿ ಬಹಳ ಅಚ್ಚರಿ ಮೂಡಿಸಿದೆ.‌

ಲೋಕಾಸಭಾ ಚುನಾವಣೆಯ ಪಕ್ಷದ ಸಾಧನೆಯ ಕುರಿತು ಚರ್ಚೆ ನಡೆಯಲಿದ್ದು, ಯಾವೆಲ್ಲ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಗೆದ್ದಿದ್ದಾರೆ ಮತ್ತು ಎಲ್ಲಿ ಸೋಲಾಗಿದೆ ಎಂಬುದರ ಸಂಕ್ಷಿಪ್ತ ವರದಿಯೊಂದಿಗೆ ತೆರಳಿದ್ದಾರೆ.

ಇದಲ್ಲದೆ ಕರ್ನಾಟಕದಲ್ಲಿ ಅತಿ ಹೆಚ್ಚು ಕ್ರೆಡಿಟ್ ಜೆಡಿಎಸ್ ಗೆ ನೀಡಲಾಗುತ್ತಿದ್ದು ಮೈತ್ರಿಯ ಗೆಲುವಲ್ಲಿ ಎಚ್ ಡಿಕೆ ಪಾತ್ರ ಬಹಳ ದೊಡ್ಡದು ಎಂದು ವರಿಷ್ಠರ ಬಿಗ್‌ ಕ್ರೆಡಿಟ್ ಕುಮಾರಸ್ವಾಮಿ ಗೆ ನೀಡಲಾಗಿದೆ. ಇದರಿಂದ ರಾಜ್ಯ ಬಿಜೆಪಿ ಪಾಳಯದಲ್ಲಿ ಬೇಸರ ಮೂಡಿದೆ.

ಕೆಲ ಕ್ಷೇತ್ರಗಳಲ್ಲಿ ಮೈತ್ರಿಯಿಂದ ನಮಗೆ ಲಾಭವಾಗಿರಬಹುದು. ಆದ‌ರೆ ನಮ್ಮಗಿಂತ ಅವರಿಗೆ ಅತಿ ಹೆಚ್ಚು ಲಾಭ ಅಗಿದೆ. ಜೆಡಿಎಸ್‌ ಇಲ್ಲವೆಂದರೂ ನಾವು ಹೆಚ್ಚು ಸ್ಥಾನ ಪಡೆಯುತ್ತಿದ್ದೆವು. ಮೈತ್ರಿಯಿಂದ ಅವರ ಪಕ್ಷದ ಮರು ಹುಟ್ಟಿಗೆ ಕಾರಣವಾಗಿದೆ ಎಂದು ಬಿವೈ ವಿಜಯೇಂದ್ರ ವರದಿ ನೀಡಲಿದ್ದಾರೆ.

ಹೆಚ್ಚಿನ ಸುದ್ದಿ