ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ತಮ್ಮ ಮುಂದಿನ ಸಿನಿಮಾಗೆ 40 ಕೋಟಿ ಸಂಭಾವನೆಗೆ ಡಿಮ್ಯಾಂಡ್ ಮಾಡಿದ್ದರು ಎಂದು ಅವರ ಆಪ್ತಯೊಬ್ಬರು ತಿಳಿಸಿದ್ದಾರೆ.
ಡೆವಿಲ್ ಸಿನಿಮಾ ಬಳಿಕ KVN ಪ್ರೊಡಕ್ಷನ್ನಲ್ಲಿ ನಟಿಸಲು ದರ್ಶನ್ ಸಿದ್ಧತೆ ನಡೆಸಿದ್ರು. ಅದಾದ ಬಳಿಕ ಮುಂಬೈನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗೆ ಡೇಟ್ಸ್ ನೀಡಿದ್ದು, ಅದಕ್ಕಾಗಿ ಬರೋಬ್ಬರಿ 40 ಕೋಟಿ ಸಂಭಾವನೆಗೆ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ.
ಇನ್ನು ನಿರ್ಮಾಪಕರು ಕೂಡ ದರ್ಶನ್ ಡಿಮ್ಯಾಂಡ್ಗೆ ಗ್ರೀನ್ ಸಿಗ್ನಲ್ ನೀಡಿ ಅಡ್ವಾನ್ಸ್ ಕೊಟ್ಟಿದ್ದರಂತೆ. ಸದ್ಯ ಡೆವಿಲ್ಗೆ 22 ಕೋಟಿ ಸಂಭಾವನೆ ಪಡೆಯುತ್ತಿರೋ ದರ್ಶನ್, ಮುಂದಿನ ಸಿನಿಮಾಗೆ 40 ಕೋಟಿ ಪಡೆಯೋಕೆ ಮುಂದಾಗಿದ್ದರು. ಅಷ್ಟರಲ್ಲೇ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲುಪಾಲಾಗಿದ್ದಾರೆ.
ಇನ್ನು ದರ್ಶನ್ ಬಿಡುಗಡೆಯ ನಂತರ ಶೂಟಿಂಗ್ ಆರಂಭಿಸುತ್ತಾರಾ..? ಅಥವಾ ಪ್ರೊಜೆಕ್ಟ್ ಕ್ಯಾನ್ಸಲ್ ಮಾಡುತ್ತಾರಾ ಅಂತ ಕಾದುನೋಡಬೇಕಿದೆ.