ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಬಂಧಪಟ್ಟಂತೆ ಈಗಾಗಲೇ ನಟ ದರ್ಶನ್ ಸೇರಿದಂತೆ ಆತನ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದು, ಇದೀಗ ದರ್ಶನ್ ಬಗ್ಗೆ ನಟಿ ಭಾವನಾ ರಾಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ನಮ್ಮ ಕುಟುಂಬದವರನ್ನು ಬಿಟ್ಟು ಕೊಡಲು ಆಗಲ್ಲ. ಸಿಹಿ ಅಥವಾ ಕಹಿ ಏನೇ ಬರಲಿ ಜೊತೆಯಾಗಿ ಇರಬೇಕು. ಕೆಟ್ಟವರಾ, ಒಳ್ಳೆವರಾ ಎಂದು ನಾನು ಯಾವುದನ್ನು ನಿರ್ಣಾಯ ಮಾಡುತ್ತಿಲ್ಲ. ನನ್ನ ಜೊತೆಯಲ್ಲಿರುವವರ ಪರ ನಾನು ನಿಲ್ಲುತ್ತೇನೆ ಎಂದರು.
ನನಗೆ ಮನುಷ್ಯತ್ವ ಇಲ್ಲ ಅಂತ ಅಲ್ಲ, ನಾನು ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳುವೆ, ಯಾರದೋ ಮನೆ ಹೆಣ್ಣು ಮಕ್ಕಳಿಗೆ ನೀವು ಯಾಕೆ ಮೆಸೇಜ್ ಮಾಡ್ತೀರಾ? ಏನ್ ಮೆಸೇಜ್ ಬಂದಿದೆ ಅಂತ ಹೇಳ್ಬೇಕು? ಯಾವುದು ಸರಿ-ತಪ್ಪು ಅನ್ನೋದನ್ನು ನಾನು ಇಲ್ಲಿ ಹೇಳೋದಿಲ್ಲ ಎಂದು ಭಾವನಾ ಹೇಳಿದರು.
ನಾನು ದರ್ಶನ್ ಪರ ನಿಲ್ಲುತ್ತೇನೆ. ಸಂತೋಷದಲ್ಲಿ ಜೊತೆಗಿದ್ದು ದುಖದಲ್ಲಿ ಇಲ್ಲ ಅನ್ನೋ ರೀತಿ ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರುವ ಸುದ್ದಿ ಬಗ್ಗೆ ನನಗೂ ಬೇಸರ ಇದೆ. ನೀವೇ ತಪ್ಪು-ಸರಿ ನಿರ್ಧಾರ ಮಾಡ್ಬೇಡಿ. ಕಾನೂನು ನೋಡಿಕೊಳ್ಳುತ್ತದೆ ಎಂದರು.
ಕೊಲೆ ಹೇಗೆ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಯಾರೂ ಅದನ್ನು ನೋಡಿಲ್ಲ. ದರ್ಶನ್ ಅಪರಾಧಿ ಸ್ಥಾನದಲ್ಲಿದ್ದಾರೆ ಎಂದು ನಾನು ದೂರ ಹೋಗುವುದಿಲ್ಲ. ಹೇಡಿತನದಿಂದ ಹಿಂದೆ ಸರಿಯಲ್ಲ, ಐ ಸ್ಟ್ಯಾಂಡ್ ವಿತ್ ದರ್ಶನ್ ಅಂತ ಭಾವನಾ ಹೇಳಿದ್ದಾರೆ.