Sunday, July 7, 2024
Homeಕ್ರೈಂActor Darshan Case : ಜೈಲಿನಲ್ಲಿ ‘ಡಿ’ ಬಾಸ್ ಕಣ್ಣೀರು.. ದರ್ಶನ್ ಪರಿಸ್ಥಿತಿ ಬಗ್ಗೆ ನಟ...

Actor Darshan Case : ಜೈಲಿನಲ್ಲಿ ‘ಡಿ’ ಬಾಸ್ ಕಣ್ಣೀರು.. ದರ್ಶನ್ ಪರಿಸ್ಥಿತಿ ಬಗ್ಗೆ ನಟ ವಿನೋದ್ ಪ್ರಭಾಕರ್ ಏನಂದ್ರು?

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಈಗಾಗಲೇ A2 ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ್ದಾರೆ.

ದರ್ಶನ್‌ ನೋಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್‌ ಜೈಲಿಗೆ ಭೇಟಿ ನೀಡಿದ್ದು. ಮಗನನ್ನು ಕಂಡು ದರ್ಶನ್‌ ಕನ್ಣಿರಿಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಪತ್ನಿ ವಿಜಯಲಕ್ಷ್ಮಿ ಜೊತೆ ಕೊಲೆ ವಿಚಾರ ಹಾಗೂ ಮುಂದಿನ ಕಾನೂನು ಹೋರಾಟದ ಕುರತೂ ಕೂಡಾ ದರ್ಶನ್‌ ಚರ್ಚಿಸಿದ್ದಾರೆ

ಅವರನ್ನು ಮಾತನಾಡಿಸಲು ಹೋಗಿದ್ದ ನಟ ಹಾಗೂ ದರ್ಶನ್ ಆಪ್ತ ವಿನೋದ್ ಪ್ರಭಾಕರ್ ಅವರು ಮಾಧ್ಯಮಗಳ ಎದುರು ಬೇಸರ ವ್ಯಕ್ತಪಡಿಸಿದ್ದಾರೆ.

ದರ್ಶನ್ ಭೇಟಿಗೆಂದು ಹೋದಾಗ ಅವರು ಸಾಕಷ್ಟು ಮಂಕಾಗಿದ್ದರು ಎಂದು ಹೇಳಿದ್ದಾರೆ. ಅವರು ಮುಖ ನೋಡಿ ಅವರ ಕೈಕುಲುಕಿಸಿ ಬಂದೆ. ಆಗ ಏನ್ ಟೈಗರ್ ಅಂತಾ ಒಂದೇ ಪದ ಅಂದ್ರು.. ಅದನ್ನಸ್ಟೇ ಅವರು ನನ್ನ ಬಳಿ ಮಾತನಾಡಿದ್ದಾರೆ ಎಂದು ವಿನೋದ್ ಪ್ರಭಾಕರ್ ತಿಳಿಸಿದರು.

ಈ ರೀತಿಯ ಘಟನೆ ಆಗಬಾರದಿತ್ತು. ನಡೆದುಹೋಗಿದೆ. ಮೃತ ರೇಣುಕಾಸ್ವಾಮಿ ಅವರ ಆತ್ಮಕ್ಕೆ, ಕುಟುಂಬಕ್ಕೆ ದೇವರು ಶಾಂತಿ ನೀಡಲಿ ಎಂದು ಆಶಿಸಿದರು. ಇನ್ನು ದರ್ಶನ್ ಪ್ರಕರಣದಲ್ಲಿ ವಿನೋದ್ ಯಾವುದೇ ಕಾಮೆಂಟ್ ಮಾಡದೇ ಹೊರಟು ಹೋದರು.

ಹೆಚ್ಚಿನ ಸುದ್ದಿ