ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದ ಒಳ್ಳೆ ಹುಡುಗ ನಟ ಪ್ರಥಮ್ ವಿರುದ್ಧ ನಟ ದರ್ಶನ್ ಅವರ ಕೆಲ ಅಭಿಮಾನಿಗಳು ಕೆಟ್ಟದಾಗಿ ಕಮೆಂಟ್ ಮಾಡಿರುವ ಆರೋಪಗಳು ಕೇಳಿ ಬಂದಿದ್ದವು.
ಇದೀಗ ಮತ್ತೆ ಕೆಲ ಅಭಿಮಾನಿಗಳು ಅದೇ ಚಾಳಿ ಮುಂದುವರಿಸಿದ್ದು, ಪ್ರಥಮ್ ಮತ್ತೊಮ್ಮೆ ‘ಡಿ’ ಬಾಸ್ ಫ್ಯಾನ್ಸ್ಗಳಿಗೆ ಬುದ್ಧಿ ಮಾತು ಹೇಳಿದ್ದಾರೆ.
ಎಷ್ಟು ಬುದ್ಧಿ ಹೇಳಿದ್ರೂ,ನಮ್ಮ ಪಾಡಿಗೆ ನಾವಿದ್ರೂ ಸಹಾ ಕೇಳ್ತಿಲ್ಲ ಈ #ಅಂಧಾಭಿಮಾನಿಗಳು;
ಇನ್ನೂ ಅತೀ ಅನಿಸುವಷ್ಟು ಕೆಟ್ಟ ಕಾಮೆಂಟ್,ವೈಯುಕ್ತಿಕ ಅಶ್ಲೀಲ ಸಂದೇಶ ಮಾಡ್ತಿದ್ದೀರಾ;ಎಲ್ಲಾ ದಾಖಲೆ ಪೋಲೀಸರ ಬಳಿ ಇದೆ
stationಲಿ ನಾಳೆ ಒಂದಷ್ಟು ಅಂಧರಿಗೆtreatmentಸಿಗಲಿದೆ.ದಯವಿಟ್ಟು ಇನ್ನಾದರೂ ನಿಮ್ಮ ಜೀವನ ಹಾಳುಮಾಡಿಕೊಳ್ಳದೇ ಚೆನ್ನಾಗಿ ಬದುಕಿ— Olle Hudga Pratham (@OPratham) June 29, 2024
ಈ ಕುರಿತು ಟ್ವೀಟ್ ಮಾಡಿದ್ದು, ಅಂಧಾಭಿಮಾನಿಗಳಿಗೆ ಎಷ್ಟು ಬುದ್ಧಿ ಹೇಳಿದ್ರೂ, ನಮ್ಮ ಪಾಡಿಗೆ ನಾವಿದ್ರೂ ಸಹಾ ಕೇಳ್ತಿಲ್ಲ. ಇನ್ನೂ ಅತೀ ಅನಿಸುವಷ್ಟು ಕೆಟ್ಟ ಕಾಮೆಂಟ್, ವೈಯುಕ್ತಿಕ ಅಶ್ಲೀಲ ಸಂದೇಶ ಮಾಡ್ತಿದ್ದೀರಾ. ಎಲ್ಲಾ ದಾಖಲೆ ಪೋಲೀಸರ ಬಳಿ ಇದೆ. ಸ್ಟೇಷನ್ನಲ್ಲಿ ನಾಳೆ ಒಂದಷ್ಟು ಅಂಧರಿಗೆ ಟ್ರೀಟ್ಮೆಂಟ್ ಸಿಗಲಿದೆ. ದಯವಿಟ್ಟು ಇನ್ನಾದರೂ ನಿಮ್ಮ ಜೀವನ ಹಾಳುಮಾಡಿಕೊಳ್ಳದೇ ಚೆನ್ನಾಗಿ ಬದುಕಿ ಎಂದು ಸಲಹೆ ನೀಡಿದ್ದಾರೆ.