ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ಗೆ ಇದೀಗ ತಮ್ಮ ತಾಯಿ ಹಾಗು ಸಹೋದರನ ನೆನಪು ಕಾಡುತ್ತಿದ್ದು, ನನ್ನ ತಾಯಿ – ತಮ್ಮನನ್ನು ಭೇಟಿ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ದರ್ಶನ್ ಜೈಲು ಸೇರಿ ಒಂದು ವಾರ ಕಳೆಯುತ್ತಾ ಬಂದಿದ್ದೂ ಇದುವರೆಗೂ ತಾಯಿ ಹಾಗು ಸಹೋದರ ದರ್ಶನ್ ಬೇಟಿಗೆ ಬಂದಿಲ್ಲ. ತಮ್ಮ ಭೇಟಿಗೆ ತಾಯಿ ಹಾಗು ಸಹೋದರ ಬಂದರೇ ಮಾತ್ರ ಅವಕಾಶ ಕಲ್ಪಿಸಿಕೊಡಿ ಎಂದು ಜೈಲು ಅಧಿಕಾರಿಗಳ ಬಳಿ ದರ್ಶನ್ ಮನವಿ ಮಾಡಿದ್ದಾರೆ.
ಸದ್ಯ ಜೈಲಿನಲ್ಲಿರುವ ನಟ ದರ್ಶನ್ ರನ್ನು ಭೇಟಿಯಾಗಲು ಸಿನಿಮಾ ತಾರೆಯರು ಹಾಗು ಅಭಿಮಾನಿಗಳು ಆಗಮಿಸುತ್ತಿದ್ದೂ ಯಾರನ್ನೂ ಭೇಟಿಯಾಗಲು ಮನಸ್ಸು ಮಾಡುತ್ತಿಲ್ಲ.
ಜೈಲಿನ ನಿಯಮದ ಪ್ರಕಾರ ಸಾರ್ವಜನಿಕರ ಭೇಟಿಗೆ ಅವಕಾಶವೂ ಇಲ್ಲ. ಹೀಗಾಗಿ ವಾರದಲ್ಲಿ ಎರಡು ಬಾರಿಯಷ್ಟೆ ಜೈಲಿಗೆ ಎಂಟ್ರಿ ಮಾಡಬಹುದಾಗಿದೆ. ಈ ಪೈಕಿ ಒಮ್ಮೆ ದರ್ಶನ್ರನ್ನು ಪತ್ನಿ ವಿಜಯಲಕ್ಷ್ಮಿ ಹಾಗು ಪುತ್ರ ವಿನೀಶ್ ಭೇಟಿ ಮಾಡಿ ಮಾತನಾಡಿಸಿಕೊಂಡು ಬಂದಿದ್ದಾರೆ.
ದರ್ಶನ್ ಜೈಲಿನ ಫೋನ್ ನಿಂದ ಎರಡು ದಿನಕ್ಕೊಮ್ಮೆ ಪತ್ನಿ ವಿಜಯಲಕ್ಷ್ಮಿ ಹತ್ರ ಮಾತನಾಡುತ್ತಿದ್ದು, ಕುಟುಂಬಸ್ಥರೊಂದಿಗೂ ಮಾತನಾಡಲು ಅವಕಾಶ ಕೊಡಿ ಎಂದು ಅಧಿಕಾರಿಗಳೊಂದಿಗೆ ಮನವಿ ಮಾಡಿದ್ದಾರೆ