ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ನ ಸಹಚರರು ಈಗಾಗಲೇ ಜೈಲು ಸೇರಿದ್ದಾರೆ.
ಇನ್ನು ದರ್ಶನ್ ಇರುವ ಪರಪ್ಪನ ಅಗ್ರಹಾರ ಜೈಲಿಗೆ ಪ್ರತಿನಿತ್ಯ ಅಭಿಮಾನಿಗಳು, ಚಿತ್ರರಂಗದ ಕೆಲ ನಟ-ನಟಿಯರು ಭೇಟಿಯಾಗಲು ಬರುತ್ತಿದ್ದಾರೆ. ಇಂದು ಸಹ ದರ್ಶನ್ ಅವರನ್ನು ನೋಡಲು ಪರಪ್ಪನ ಜೈಲಿಗೆ ಬಂದ ನಟ ಧನ್ವೀರ್ ಗೌಡ, ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು, ದರ್ಶನ್ ಅವರೊಂದಿಗೆ ಹೆಚ್ಚು ಮಾತನಾಡಲು ಅವಕಾಶ ಸಿಗಲಿಲ್ಲ. ಅವರು ತುಂಬಾ ಬೇಜಾರಿನಲ್ಲಿದ್ದಾರೆ ಎಂದು ಹೇಳಿದ್ದಾರೆ. ದರ್ಶನ್ ಅವರ ಭೇಟಿಗಾಗಿ ಧನ್ವೀರ್ ಸತತ 2 ಗಂಟೆಗಳ ಕಾಲ ಜೈಲಿನ ಹೊರಗೆ ಕಾದು ಕುಳಿತ್ತಿದ್ದರು.