ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ನೋಡಲು ಇಂದು ಪರಪ್ಪನ ಅಗ್ರಹಾರ ಜೈಲಿಗೆ ನಟಿ ರಕ್ಷಿತಾ ಮತ್ತವರ ಪತಿ ನಟ, ನಿರ್ದೇಶಕ ಜೋಗಿ ಪ್ರೇಮ್ ಅವರು ಕಾರಿನಲ್ಲಿ ಬಂದರು. ಕೇಂದ್ರ ಕಾರಾಗೃಹದ ಸಿಬ್ಬಂದಿಯ ಅನುಮತಿ ಪಡೆದು ರಕ್ಷಿತಾ & ಪ್ರೇಮ್ ದರ್ಶನ್ ಅವರನ್ನು ಭೇಟಿಯಾಗಿ ಮತನಾಡಿಸಲು ಒಳ ಹೋಗಿದ್ದಾರೆ.
ಇನ್ನು ಇತ್ತೀಚೆಗೆ ದರ್ಶನ್ ಅವರನ್ನು ನೋಡಲು ನಟ ಹಾಗೂ ಆಪ್ತ ವಿನೋದ್ ಪ್ರಭಾಕರ್ ಅವರೂ ಜೈಲಿಗೆ ಭೇಟಿ ನೀಡಿದ್ದರು. ಹತ್ಯೆ ಪ್ರಕರಣದಲ್ಲಿ ದರ್ಶನ್ A1 ಆರೋಪಿಯಾಗಿದ್ದು, ದರ್ಶನ್ ಆಪ್ತೆ ಪವಿತ್ರಾಗೌಡ A2 ಆರೋಪಿಯಾಗಿದ್ದಾರೆ. ನಿನ್ನೆಯಷ್ಟೇ ಪವಿತ್ರಾಗೌಡಳ ಕುಟುಂಬಸ್ಥರು ಆಕೆಯನ್ನು ನೋಡಲು ಜೈಲಿಗೆ ಬಂದಿದ್ದರು.