Sunday, July 7, 2024
Homeಕ್ರೈಂRenukaswamy Case : ನಟ ದರ್ಶನ್​​ ಭೇಟಿಗೆ ಬಂದ ಜೋಗಿ ಪ್ರೇಮ್ & ರಕ್ಷಿತಾ

Renukaswamy Case : ನಟ ದರ್ಶನ್​​ ಭೇಟಿಗೆ ಬಂದ ಜೋಗಿ ಪ್ರೇಮ್ & ರಕ್ಷಿತಾ

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪ ಪ್ರಕರಣದಲ್ಲಿ ನಟ ದರ್ಶನ್​​ & ಗ್ಯಾಂಗ್​ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಈ ಹಿನ್ನೆಲೆಯಲ್ಲಿ ದರ್ಶನ್​ ಅವರನ್ನು ನೋಡಲು ಇಂದು ಪರಪ್ಪನ ಅಗ್ರಹಾರ ಜೈಲಿಗೆ ನಟಿ ರಕ್ಷಿತಾ ಮತ್ತವರ ಪತಿ ನಟ, ನಿರ್ದೇಶಕ ಜೋಗಿ ಪ್ರೇಮ್ ಅವರು ಕಾರಿನಲ್ಲಿ ಬಂದರು. ಕೇಂದ್ರ ಕಾರಾಗೃಹದ ಸಿಬ್ಬಂದಿಯ ಅನುಮತಿ ಪಡೆದು ರಕ್ಷಿತಾ & ಪ್ರೇಮ್ ದರ್ಶನ್​​ ಅವರನ್ನು ಭೇಟಿಯಾಗಿ ಮತನಾಡಿಸಲು ಒಳ ಹೋಗಿದ್ದಾರೆ.

ಇನ್ನು ಇತ್ತೀಚೆಗೆ ದರ್ಶನ್​ ಅವರನ್ನು ನೋಡಲು ನಟ ಹಾಗೂ ಆಪ್ತ ವಿನೋದ್ ಪ್ರಭಾಕರ್ ಅವರೂ ಜೈಲಿಗೆ ಭೇಟಿ ನೀಡಿದ್ದರು. ಹತ್ಯೆ ಪ್ರಕರಣದಲ್ಲಿ ದರ್ಶನ್​  A1 ಆರೋಪಿಯಾಗಿದ್ದು, ದರ್ಶನ್​ ಆಪ್ತೆ ಪವಿತ್ರಾಗೌಡ A2 ಆರೋಪಿಯಾಗಿದ್ದಾರೆ. ನಿನ್ನೆಯಷ್ಟೇ ಪವಿತ್ರಾಗೌಡಳ ಕುಟುಂಬಸ್ಥರು ಆಕೆಯನ್ನು ನೋಡಲು ಜೈಲಿಗೆ ಬಂದಿದ್ದರು.

ಹೆಚ್ಚಿನ ಸುದ್ದಿ