ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಂದಿಗೆ ದರ್ಶನ ಜೈಲು ಸೇರಿ 9 ದಿನ ಕಳೆದಿದೆ.
ಜೈಲಿನಲ್ಲಿ ಯಾರ ಬಳಿಯೂ ಮಾತನಾಡದ ದರ್ಶನ್ ಸದಾ ಮೌನವಾಗಿರುತ್ತಿದ್ದರು. ನಿನ್ನೆ ರಾತ್ರಿ ಭಾವುಕರಾಗಿ ನಿದ್ದೆ ಮಾಡದೆ ತುಂಬ ಸಮಯ ಕುಳಿತಿದ್ದರು ಎನ್ನಲಾಗುತ್ತಿದೆ.
ದರ್ಶನ್ ಭೇಟಿಗೆ ಆಗಮಿಸಿದ ಸ್ನೇಹಿತೆ ರಕ್ಷಿತಾ ಪ್ರೇಮ್ ಜೊತೆ ಮಾತನಾಡಿ ಅವರ ಬಳಿ ಘಟನೆ ಬಗ್ಗೆ ವಿವರಿಸಿದ್ದಾರೆ. ಇದೇ ಸಮಯದಲ್ಲಿ ಮಗ ಹಾಗು ಕುಟುಂಬದವರನ್ನು ದರ್ಶನ್ ನೆನಸಿಕೊಂಡಿದ್ದಾರೆ.
ಇಂದು ಮುಂಜಾನೆ ಎದ್ದು ವಾಕಿಂಗ್ ಮಾಡಿದ್ದಾರೆ. ಜೈಲಿನ ಮೆನು ಪ್ರಕಾರ ರಾತ್ರಿ ಊಟ ಸೇವಿಸಿದ ದರ್ಶನ್ ಗೆ ಇಂದು ಜೈಲು ಅಧಿಕಾರಿಗಳು ನಾನ್ ವೆಜ್ ನೀಡುತ್ತಾರೆ ಎಂದು ಹೇಳಲಾಗುತ್ತಿದೆ.