ಬೆಂಗಳೂರು: ನಟ ದರ್ಶನ್ಗೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೀಗ ಜೈಲಿನಲ್ಲಿ ದರ್ಶನ್ಗೆ ವಿಶೇಷ ಆತಿಥ್ಯ ನೀಡಲು ಕೆಲ ಕೈಗಳು ಕೆಲಸ ಮಾಡುತ್ತಿವೆ ಎಂಬ ಮಾಹಿತಿ ಕೇಳಿ ಬರುತ್ತಿದೆ.
ಹೌದು, ವಿಲ್ಸನ್ ಗಾರ್ಡನ್ ನಾಗಾ ಮತ್ತು ಸೈಕಲ್ ರವಿ ಈಗಾಗಲೇ ದರ್ಶನ್ ಹಿಂದೆ ಬಿದ್ದಿದ್ದಾರೆ. ನಮ್ಮ ಬಾಸ್ ಗೆ ವಿಶೇಷ ಸೌಕರ್ಯ ನೀಡಬೇಕೆಂದು ಅವರ ನಡುವೆಯೇ ಪೈಪೋಟಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ಕೊಲೆ ಕೇಸ್ ನಲ್ಲಿ ವಿಲ್ಸನ್ ಗಾರ್ಡನ್ ನಾಗಾ ಜೈಲಿನಲ್ಲಿದ್ದಾನೆ.
ಆದರೆ ಸೈಕಲ್ ರವಿ ಜೈಲಿನಲ್ಲಿ ಇಲ್ಲದಿದ್ದರೂ ಅಲ್ಲಿರುವ ತನ್ನ ಹುಡುಗರ ಮೂಲಕ ದರ್ಶನ್ ನೋಡಿಕೊಳ್ಳಲು ಸೂಚನೆ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ದರ್ಶನ್ ನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಕಾರಣಕ್ಕೆ ಇಬ್ಬರು ರೌಡಿಗಳು ಹರ ಸಾಹಸಪಡುತ್ತಿದ್ದಾರೆ.
ದರ್ಶನ್ ಸಿನಿಮಾ ಮಾಡುವಾಗಲೇ ರೌಡಿಗಳ ಸಂಪರ್ಕದಲ್ಲಿದ್ದ ಎನ್ನುವ ಸಂಶಯ ಮೂಡಿಬರುತ್ತಿದೆ. ಈ ಹಿಂದೆ ಈ ಆರೋಪಗಳು ದರ್ಶನ್ ವಿರುದ್ಧ ಕೇಳಿ ಬಂದಿತ್ತು, ಇದೆಲ್ಲ ಗಮನಿಸಿದರೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ ಹಲವು ರೌಡಿಗಳ ಸಂಪರ್ಕ ದರ್ಶನ್ ಗೆ ಇದೆ ಎಂಬ ಆರೋಪ ಈಗಾ ದೊಡ್ಡದಾಗುತ್ತಿದೆ.