Sunday, July 7, 2024
Homeಟಾಪ್ ನ್ಯೂಸ್ACTOR DARSHAN : ಸಮಯ ಕಳೆಯೋದೇ ಹಿಂಸೆ - ಭಯಾನಕ ಬುಕ್ಸ್‌ಗಳ ಮೊರೆ‌‌ ಹೋದ ದರ್ಶನ್,...

ACTOR DARSHAN : ಸಮಯ ಕಳೆಯೋದೇ ಹಿಂಸೆ – ಭಯಾನಕ ಬುಕ್ಸ್‌ಗಳ ಮೊರೆ‌‌ ಹೋದ ದರ್ಶನ್, ಪವಿತ್ರಾ!

ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಪವಿತ್ರ ಗೌಡ ಜೈಲಿನಲ್ಲಿ ಪುಸ್ತಕದ ಮೊರೆ ಹೋಗಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನ ಕಂಬಿ ಹಿಂದೆ ಕಾಲ ಕಳೆಯುತ್ತಿರುವ ದರ್ಶನ್ ಲೈಬ್ರೆಯಿಂದ ಹಾರರ್ ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದಾರೆ.

ದಿನನಿತ್ಯ ಪಾರ್ಟಿ, ಶೂಟಿಂಗ್, ಫ್ರೆಂಡ್ಸ್ ಹೀಗೆ ದಿನ ಕಳೆಯುತ್ತಿದ್ದ ನಟ ದರ್ಶನ್ ಗೆ ನಾಲ್ಕು ಗೋಡೆಯ ನಡುವೆ ಕಾಲ ಕಳೆಯೋದೆ ಬಹಳ ಕಷ್ಟ ಪಡುತ್ತಿದ್ದಾರೆ. 

ಜೈಲಿನ ಕೊಠಡಿಯೊಳಗೆ ಯಾವುದೇ ಟಿವಿ ವ್ಯವಸ್ಥೆ ಹಾಗೂ ಮೊಬೈಲ್ ಉಪಯೋಗಿಸಲು ಸಾಧ್ಯವಿಲ್ಲ. ಹೀಗಾಗಿ ಜೈಲಿನಲ್ಲಿ ನಟ ದರ್ಶನ ಹಾಗೂ ಪವಿತ್ರ ಗೌಡ ಪುಸ್ತಕದ ಮೊರೆ ಹೋಗಿದ್ದಾರೆ.

ಹೆಚ್ಚಿನ ಸುದ್ದಿ