ಮಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಬೇಸತ್ತ ಹೆಬ್ಬಾವಿನ ಮರಿಯೊಂದು ನೇರವಾಗಿ ಬ್ಯಾಂಕ್ ನ ಎಸಿಯೊಳಗೆ ಸೇರಿಕೊಂಡಿರುವ ಘಟನೆ ನಡೆದಿದೆ.
ನಗರದ ಕೊಡಿಯಾಲ್ ಬೈಲ್ ಯೂನಿಯನ್ ಬ್ಯಾಂಕ್ ನಲ್ಲಿ ಹೆಬ್ಬಾವು ಮರಿ ಪ್ರತ್ಯಕ್ಷವಾಗಿದ್ದು, ಎ.ಸಿ.ಪ್ಯಾನಲ್ ನಿಂದ ಆಗಾಗ ತಲೆ ಹೊರಹಾಕುತ್ತಿದ್ದರಿಂದ ಹಾವು ಒಳ ಸೇರಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಉರಗ ತಜ್ಞ ಗಂಗೇಶ್ ಬೋಳಾರ್ ಹಾವಿನ ಬಗ್ಗೆ ತಿಳಿಸಿದ್ದು, ಸ್ಥಳಕ್ಕೆ ಬಂದ ಅವರು ಮರಿ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ.
ಇನ್ನು ಹಾವಿನ ಮರಿ ಎ.ಸಿ.ಯ ಔಟ್ ಡೋರ್ ನ ಕೇಬಲ್ ಮೂಲಕ ಒಳ ಬಂದಿರುವ ಸಾಧ್ಯತೆ ಇದೆ ತಿಳಿದು ಬಂದಿದ್ದು, ಹಾವನ್ನು ಹಿಡಿದ ನಂತರ ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ.