Wednesday, February 19, 2025
Homeಟಾಪ್ ನ್ಯೂಸ್ಕೈತಪ್ಪಿದ ಟಿಕೆಟ್: ಬಂಡಾಯ ಅಭ್ಯರ್ಥಿಯಾಗಿ ವೈ.ಎಸ್.ವಿ ದತ್ತಾ ಕಣಕ್ಕೆ

ಕೈತಪ್ಪಿದ ಟಿಕೆಟ್: ಬಂಡಾಯ ಅಭ್ಯರ್ಥಿಯಾಗಿ ವೈ.ಎಸ್.ವಿ ದತ್ತಾ ಕಣಕ್ಕೆ

ಚಿಕ್ಕಮಗಳೂರು: ಕಾಂಗ್ರೆಸ್ ವಿರುದ್ಧ ವೈಎಸ್‌ವಿ ದತ್ತಾ ಸಿಡಿದೆದ್ದಿದ್ದಾರೆ. ದತ್ತಾಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಬೆನ್ನಲ್ಲೆ ಕಡೂರು ನಗರದಲ್ಲಿ ಸಾವಿರಾರು ಕಾರ್ಯಕರ್ತರ ಮೆರವಣಿಗೆ ಮುಖಾಂತರ ಶಕ್ತಿ ಪ್ರದರ್ಶನ ಮಾಡಿದ್ರು.

ನಗರದ ಮುಖ್ಯ ರಸ್ತೆಯಲ್ಲಿ ಅಭಿಮಾನಿಗಳ ಜೊತೆ ಕಾಲ್ನಡಿಗೆ ಜಾಥಾ ನಡೆಸಿ ಕಡೂರಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರೋ ಸ್ವಾಭಿಮಾನಿ ಸಭೆ ನಡೆಸಿದ್ರು. ಸಭೆಗೂ ಮುನ್ನಾ ಸಾವಿರಾರು ಅಭಿಮಾನಿಗಳು ದತ್ತಾ ಪರ ಘೋಷಣೆ ಕೂಗಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಒತ್ತಾಯಿಸಿದ್ರು. ಕಡೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ದತ್ತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ

ಕಡೂರು ನಗರದಲ್ಲಿ ವೈಎಸ್‌ವಿ ದತ್ತಾ ಪರ ಅಭಿಮಾನಿಗಳ ಜಾಥಾ

ಹೆಚ್ಚಿನ ಸುದ್ದಿ

error: Content is protected !!