ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ರಾಜಕೀಯ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮತ್ತು ಶಿವಸೇನಾ ಯುಬಿಟಿ (UBT) ಕಾರ್ಯಕರ್ತರು ಯುವಕನೊಬ್ಬನನ್ನು ವಿವಸ್ತ್ರಗೊಳಿಸಿ, ಥಳಿಸಿ ಎಳೆದೊಯ್ದ ಶಾಕಿಂಗ್ ಘಟನೆ ಮಹಾರಾಷ್ಟ್ರದ (Maharashtra) ನಲಸೋಪಾರದಲ್ಲಿ (Nalasopara) ನಡೆದಿದೆ.
ಘಟನೆಯ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ನವನಿರ್ಮಾಣ ಸೇನೆ ಮತ್ತು ಶಿವಸೇನಾ ಯುಬಿಟಿ ಕಾರ್ಯಕರ್ತರು ಯುವಕನೊಬ್ಬನನ್ನು ವಿವಸ್ತ್ರಗೊಳಿಸಿ, ರಸ್ತೆಯುಂದಲ್ಲೂ ಎಳೆದುಕೊಂಡು ಹೋಗಿ ಅಮಾನುಷವಾಗಿ ಥಳಿಸುತ್ತಿರುವುದು ಕಾಣಿಸಿಕೊಂಡಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
A very disturbing incident has come to light from #Nalasopara, which has caused widespread outrage after a youth was beaten up and made a mockery of by the #MaharashtraNavnirmanSena (#MNS) and #ShivSenaUBT (#SSUBT) workers for posting abusive comments against prominent political… pic.twitter.com/D41keKnxNL
— Hate Detector 🔍 (@HateDetectors) January 30, 2026
ಮಾಹಿತಿಯ ಪ್ರಕಾರ, ಆ ಯುವಕನನ್ನು ಸೂರಜ್ ಮಹೇಂದ್ರ ಶಿರ್ಕೆ ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ, ಈತ ಫೇಸ್ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ರಾಜ್ ಠಾಕ್ರೆ, ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ವಿರುದ್ಧ ಅತ್ಯಂತ ಅವಹೇಳನಕಾರಿ ಮತ್ತು ಅಶ್ಲೀಲ ಕಾಮೆಂಟ್ಗಳನ್ನು ಪೋಸ್ಟ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕಾಮೆಂಟ್ಗಳು ಪಕ್ಷದ ಸದಸ್ಯರನ್ನು ಕೆರಳಿಸಿದೆ ಎನ್ನಲಾಗಿದೆ.
ಎಂಎನ್ಎಸ್ ಉಪವಿಭಾಗೀಯ ಅಧ್ಯಕ್ಷ ಕಿರಣ್ ನಕಾಶೆ ಮತ್ತು ಅವರ ಸಹಚರರಿಗೆ ಯುವಕ ನಲಸೋಪಾರ ಪ್ರದೇಶದಲ್ಲಿ ಅಡಗಿಕೊಂಡಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಈ ಮಾಹಿತಿಯ ಆಧಾರದ ಮೇಲೆ, ಎಂಎನ್ಎಸ್ ಕಾರ್ಯಕರ್ತರ ಗುಂಪು ಯುವಕನನ್ನು ಪತ್ತೆಹಚ್ಚಿ ಥಳಿಸಿದೆ. ಯುವಕನನ್ನು ಭಾಗಶಃ ವಿವಸ್ತ್ರಗೊಳಿಸಿ ಸುಮಾರು ಒಂದೂವರೆ ಕಿಲೋಮೀಟರ್ ರಸ್ತೆಯ ಉದ್ದಕ್ಕೂ ಎಳೆದುಕೊಂಡು ಹೋದಾಗಿದ್ದಾರೆ. ನಂತರ ಮನಬಂದಂತೆ ಥಳಿಸಿದ್ದಾರೆ. ಪದೇಪದೇ ಕಪಾಳಮೋಕ್ಷ ಮಾಡಿದ್ದಾರೆ.
ಘಟನೆಯ ನಂತರ, ಕಾರ್ಯಕರ್ತರು ತೆಗೆದುಕೊಂಡ ಕ್ರಮವನ್ನು ಬೆಂಬಲಿಸಿ ಕಿರಣ್ ನಕಾಶೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. ರಾಜಕೀಯ ಪಕ್ಷದ ಬೆಂಬಲಿಗರು ದೇವರೆಂದು ಪರಿಗಣಿಸುವ ನಾಯಕರ ವಿರುದ್ಧ ಅಶ್ಲೀಲ ಭಾಷೆಯನ್ನು ಬಳಸುವ ಯಾರಾದರೂ ಅವರ ಹಿನ್ನೆಲೆ ಮತ್ತು ಗುರುತನ್ನು ಲೆಕ್ಕಿಸದೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಘಟನೆಯು ನಲಸೋಪರ ಪ್ರದೇಶದಲ್ಲಿ ಸ್ವಲ್ಪ ಸಮಯದವರೆಗೆ ಉದ್ವಿಗ್ನತೆಯನ್ನು ಉಂಟುಮಾಡಿದೆ. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ. ಆದರೆ ನೈತಿಕ ಪೊಲೀಸ್ಗಿರಿ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅಂತಹ ಪ್ರಕರಣಗಳನ್ನು ನಿಭಾಯಿಸುವಲ್ಲಿ ಪೊಲೀಸರ ಪಾತ್ರದ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ಮಗನನ್ನು ಚಿರತೆ ದಾಳಿಯಿಂದ ರಕ್ಷಿಸಿದಾತನ ಮೇಲೆ ಅರಣ್ಯ ಇಲಾಖೆ ಕೇಸ್!