ಬೆಂಗಳೂರು : ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕರನ್ನು ಕೊಂದ ಪಾಕಿಸ್ತಾನದ ಉಗ್ರರಿಗೆ ಭಾರತವು ಪಾಕ್ಗೆ ನುಗ್ಗಿ ಕ್ರಿಮಿಗಳನ್ನು ಹೊಸಕಿಹಾಕಿದೆ. ಭಯೋತ್ಪಾದಕರ ತಾಣಗಳನ್ನ ಧ್ವಂಸಗೊಳಿಸಿದೆ.
ಉಗ್ರ ಮತ್ತು ಆ ಕ್ರಿಮಿಗಳನ್ನು ಪೋಷಿಸುತ್ತಿರುವ ಪಾಪಿ ಪಾಕ್ ವಿರುದ್ಧ ಪ್ರತೀಕಾರ ಹಾಗೂ ಯುದ್ಧ ಸಾರಬೇಕು ಎಂದು ದೇಶವಾಸಿಗಳಿಂದ ಕೂಗುಗಳು ಕೇಳಿ ಬರುತ್ತಿರುವೆ. ಭಾರತ ಪಾಕ್ಗೆ ನುಗ್ಗಿ ಹೊಡೆದಿರುವ ಬಗ್ಗೆ ಅನೇಕ ನಟ-ನಟಿಯರು ಸೇನೆಯ ಪರಾಕ್ರಮವನ್ನ ಕೊಂಡಾಡುತ್ತಿದ್ದಾರೆ. ದೇಶವು ಯುದ್ಧಕ್ಕೆ ಸಜ್ಜಾಗಿ, ಸಿದ್ಧತೆಗಳನ್ನ ಆರಂಭಿಸಿರುವ ಇಂತಹ ವಾತಾವರಣದಲ್ಲಿ ನಟಿ ಗಲ್ರಾನಿ ಯುದ್ಧ ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ನಾನು ದೇಶಪ್ರೇಮಿ.. ಯಾವುದೇ ಕ್ರಿಯೆಗೆ ಸಮಾನವಾದ ಅಥವಾ ವಿರುದ್ಧವಾದ ಪ್ರತಿಕ್ರಿಯೆ ಇರಲಿದೆ. ಅದರೊಂದಿಗೆ ನಾನು ಶಾಂತಿ ಪ್ರಿಯಳು. ಯುದ್ಧದಿಂದ ದೇಶದ ಗೌರವಕ್ಕೆ ಒಳ್ಳೆಯದಲ್ಲ. ಒಂದು ವೇಳೆ ಯುದ್ಧವಾದರೆ ಅದು ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ಪೆಟ್ಟುಬೀಳಲಿದೆ.
ಯುದ್ಧದಲ್ಲಿ ಭಾಗಿಯಾಗುವ ದೇಶಗಳಿಗೆ ಆಗುವ ಅಪಾರ ಹಾನಿಗಳಿಗೆ ಪರಿಹಾರ ಸಾಧ್ಯವೇ ಇಲ್ಲ. ಯುದ್ಧದ ಪರಿಣಾಮದಿಂದ ಜನ ಜೀವನ ಸ್ತಬ್ಧಗೊಳ್ಳುತ್ತದೆ. ಎಲ್ಲವೂ ಶಾಂತಿಯಿಂದ ಮುಕ್ತಾಯವಾಗಲಿದೆ ಎಂಬ ನಿರೀಕ್ಷೆ ಇದೆ. ಜೈ ಹಿಂದ್.. ಎಂದು ಗಲ್ರಾನಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ನಟಿಯ ಈ ನಿಲುವಿಗೆ ವಿರೋಧಗಳು ವ್ಯಕ್ತವಾಗುತ್ತಿವೆ.