ಮುಂಬೈ: ದುಪ್ಪಟ್ಟು ದರ ವಸೂಲಿ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ ಪ್ರಯಾಣಿಕನಿಗೆ ರೈಲ್ವೇ ನಿರ್ವಹಣಾ ಸಿಬ್ಬಂದಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ.
ಋಷಿಕೇಶದಿಂದ ವೈಷ್ಣೋದೇವಿಗೆ ತೆರಳುವ ಹೇಮಕುಂಟ್ ಎಕ್ಸ್ಪ್ರೆಸ್ ರೈಲು 14609ರಲ್ಲಿ ಈ ಘಟನೆ ನಡೆದಿದೆ. ಎಸಿ ಕೋಚ್ನಲ್ಲಿ ರೈಲ್ವೇ ನಿರ್ವಹಣಾ ಸಿಬ್ಬಂದಿಯೋರ್ವ ತನ್ನ ಸಹ ಸಿಬ್ಬಂದಿಯೊಂದಿಗೆ ಸೇರಿ ಹಲ್ಲೆ ಮಾಡಿದ್ದಾನೆ.
ಪ್ರಯಾಣಿಕ ಊಟಕ್ಕೆ ಆರ್ಡರ್ ಮಾಡಿದ್ದ. ಆದರೆ ನಿಗದಿತ ಊಟದ ದರಕ್ಕಿಂತ ದುಪ್ಪಟ್ಟು ದರ ವಸೂಲಿ ಮಾಡಲಾಗಿತ್ತು. ಅದನ್ನು ಪ್ರಯಾಣಿಕ ಪ್ರಶ್ನೆ ಮಾಡಿದ್ದ. ಅಲ್ಲದೆ ಹೆಚ್ಚುವರಿ ಹಣ ಪಡೆದಿದ್ದನ್ನು ವಿಡಿಯೋ ಮಾಡುತ್ತಿದ್ದ. ಅದನ್ನು ಗಮನಿಸಿದ ರೈಲ್ವೇ ಸಿಬ್ಬಂದಿ ರೊಚ್ಚಿಗೆದ್ದು, ತನ್ನ ಸಹ ಸಿಬ್ಬಂದಿಯನ್ನು ಕರೆಸಿಕೊಂಡು ಮೇಲಿನ ಬರ್ತ್ನಲ್ಲಿದ್ದ ಪ್ರಯಾಣಿಕನಿಗೆ ಥಳಿಸಿದ್ದಾನೆ.
This is The Passenger Security in 3rd AC of Indian Railway #shame || When I complained about overcharging in Train by Pantry , an attempt was made to kill me 😭😭
Train no.14609
PNR – 2434633402@RailMinIndia @IRCTCofficial @narendramodi @RailwayNorthern @AshwiniVaishnaw pic.twitter.com/VSNZlblHOQ— Mr.Vishal (@Mrvishalsharma_) May 7, 2025
ರೈಲ್ವೇ ಸಿಬ್ಬಂದಿ ದಾಳಿಯಿಂದ ಪ್ರಯಾಣಿಕನಿಗೆ ಗಾಯಗಳಾಗಿವೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ರೈಲ್ವೇ ಇಲಾಖೆ ಇಂತಹ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.