Wednesday, February 19, 2025
Homeಟಾಪ್ ನ್ಯೂಸ್ಅತ್ಯಂತ ನೋವಿನ ಕ್ಷಣ: ಪುತ್ರನ ಬಿಜೆಪಿ ಸೇರ್ಪಡೆ ಬಗ್ಗೆ ಎ.ಕೆ. ಆ್ಯಂಟನಿ

ಅತ್ಯಂತ ನೋವಿನ ಕ್ಷಣ: ಪುತ್ರನ ಬಿಜೆಪಿ ಸೇರ್ಪಡೆ ಬಗ್ಗೆ ಎ.ಕೆ. ಆ್ಯಂಟನಿ

ನವದೆಹಲಿ: ತಮ್ಮ ಪುತ್ರ ಅನಿಲ್ ಆ್ಯಂಟನಿ ಬಿಜೆಪಿ ಸೇರಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ, ಮಾಜಿ ರಕ್ಷಣಾ ಸಚಿವ ಎಕೆ ಆ್ಯಂಟನಿ ಇದು “ತಪ್ಪು ನಿರ್ಧಾರ” ಮತ್ತು “ನೋವಿನ” ಕ್ಷಣ ಎಂದಿದ್ದಾರೆ.

ಬಿಜೆಪಿ ಮತ್ತು ಆರೆಸ್ಸೆಸನ್ನು ಸಿದ್ಧಾಂತವನ್ನು ತಾನು ಎಂದಿಗೂ ಬೆಂಬಲಿಸುವುದಿಲ್ಲ. ಅವರು ದೇಶವನ್ನು ವಿಭಜಿಸಲು ಮತ್ತು ಪ್ರಜಾಪ್ರಭುತ್ವದ ಅಡಿಪಾಯವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆ್ಯಂಟನಿ ಹೇಳಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ನ “ಕೋಮುವಾದ ಮತ್ತು ವಿಭಜಕ ಅಜೆಂಡಾವನ್ನು ನಾನು ಯಾವಾಗಲೂ ವಿರೋಧಿಸುತ್ತಿದ್ದೆ ಮತ್ತು ಕೊನೆಯ ಉಸಿರು ಇರುವವರೆಗೂ’’ ಅದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.

ಭಾರತವನ್ನು ಒಗ್ಗಟ್ಟಿನಿಂದ ಉಳಿಸಿದ ಮತ್ತು ದೇಶದ ವೈವಿಧ್ಯತೆಯನ್ನು ಗೌರವಿಸಿದ ಕೀರ್ತಿ ನೆಹರೂ–ಗಾಂಧಿ ಕುಟುಂಬಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಅವರಿಗೆ ತಾನು ನಿಷ್ಠನಾಗಿರಲಿದ್ದೇನೆ ಎಂದವರು ಹೇಳಿದರು.

ಹೆಚ್ಚಿನ ಸುದ್ದಿ

error: Content is protected !!