Wednesday, May 14, 2025
Homeಟಾಪ್ ನ್ಯೂಸ್TIRANGA YATRA : ನಮ್ಮ ಯೋಧರಿಗೆ ಬೆಂಬಲ ಸೂಚಿಸಲು ಡಿಸಿಎಂ ಡಿಕೆಶಿ "ತಿರಂಗಾ ಯಾತ್ರೆ"ಗೆ ಕರೆ

TIRANGA YATRA : ನಮ್ಮ ಯೋಧರಿಗೆ ಬೆಂಬಲ ಸೂಚಿಸಲು ಡಿಸಿಎಂ ಡಿಕೆಶಿ “ತಿರಂಗಾ ಯಾತ್ರೆ”ಗೆ ಕರೆ

ಬೆಂಗಳೂರು : ಏ.22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ನರಮೇಧಕ್ಕೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಭಾರತ  ಮುಂದುವರಿಸಿದೆ.

ಪಾಕ್​ ಗೆ ತಕ್ಕ ಉತ್ತರ ನೀಡಲು ಈಗಾಗಲೇ ಭಾರತ ಪಾಕಿಸ್ತಾನದ ಒಳಗೆ ನುಗ್ಗಿ ಭಯೋತ್ಪಾದಕರ ಅಡಗು ತಾಣ, ತರಬೇತಿ ಕೇಂದ್ರಗಳ ಮೇಲೆ ಬಾಂಬ್ ಎಸೆದು ನಾಶಮಾಡುವ ಮೂಲಕ ಪರಾಕ್ರಮ ಮೆರೆದಿದೆ.

ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಸೇನೆಯು ನಡೆಸುತ್ತಿರುವ ಆಪರೇಷನ್​​ ಸಿಂಧೂರ ಕಾರ್ಯಾಚರಣೆಗೆ ಒಕ್ಕೊರಲಿನ ಬೆಂಬಲ ನೀಡುವುದು ಈ ದೇಶದ ಪ್ರತಿಯೊಬ್ಬರ ನಾಗರೀಕನ ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಯೋಧರಿಗೆ ಬೆಂಬಲ ಸೂಚಿಸಲು ನಾಳೆ (ಮೇ.9) ಬೆಳಗ್ಗೆ 9.30 ರಿಂದ 10.30 ರವರೆಗೆ ಬೆಂಗಳೂರಿನ ಕೆ.ಆರ್. ವೃತ್ತದಿಂದ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿ ಇರುವ ಮಿನ್ಸ್ಕ್ ಸ್ಕ್ವೇರ್ ವರೆಗೆ ‘ತಿರಂಗಾ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.


ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ತಿರಂಗಾ ಯಾತ್ರೆಯಲ್ಲಿ ಸಾಹಿತಿಗಳು, ಚಿಂತಕರು, ವಿದ್ಯಾರ್ಥಿಗಳು, ಮಹಿಳೆಯರು, ಸರ್ಕಾರಿ ಮತ್ತು ಖಾಸಗಿ ಉದ್ದಿಮೆಗಳ ನೌಕರರು, ಸಂಘ-ಸಂಸ್ಥೆಗಳು, ಚಲನಚಿತ್ರರಂಗದವರು ಸೇರಿದಂತೆ ಪಕ್ಷಬೇಧ ಮರೆತು ಸರ್ವರೂ ಭಾಗವಹಿಸಿ ಎಂದಿದ್ದಾರೆ.

ಹೆಚ್ಚಿನ ಸಂಖೆಯಲ್ಲಿ ಪಾಲ್ಗೊಂಡು, ದೇಶಪ್ರೇಮ ಮೆರೆಯೋಣ. ಯಾತ್ರೆಯಲ್ಲಿ ಭಾಗವಹಿಸುವವರು ಭಾರತದ ಧ್ವಜವನ್ನು ಮಾತ್ರ ಪ್ರದರ್ಶಿಸಬೇಕು ಎಂದು ಡಿಕೆಶಿ ಅವರು ಮನವಿ ಮಾಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!