ಬಾಗಲಕೋಟೆ: ಭಾರತ ನಡೆಸಿದ ಆಪರೇಷನ್ ಸಿಂಧೂರದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡುವ ವೇಳೆ ಸಿಎಂಸಿದ್ದರಾಮಯ್ಯ ಕೂಡ ಸಿಂಧೂರ ಇಟ್ಟುಕಂಗೊಳಿಸುತ್ತಿದ್ದರು. ಇದೀಗ ಈ ಕುರಿತು ಬಿಜೆಪಿ ಸಂಸದ ಗೋವಿಂದ ಕಾರಜೋಳ ಮುಖ್ಯಮಂತ್ರಿಗಳನ್ನು ಕಿಚಾಯಿಸಿದ್ದು ಸಿದ್ದು ಕಾಲೆಳೆದಿದ್ದಾರೆ.
ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ಕೆಲ ನಾಯಕರು ಉತ್ತಮ ಕಲಾವಿದರಿದ್ದಾರೆ. ಈ ಹಿಂದೆ ಭಾರತದ ಸೇನೆ ಬಾಲಾಕೋಟ್ ದಾಳಿ ಮಾಡಿದಾಗ ಕಾಂಗ್ರೆಸ್ ಪ್ರತಿಯೊಂದಕ್ಕೂ ಸಾಕ್ಷಿ ಕೇಳಿತ್ತು. ಆದರೆ ಈ ಬಾರಿ ಆಪರೇಷನ್ ಸಿಂಧೂರ್ ಗೆ ಯಾಕೋ ಆಧಾರ ಕೇಳದೇ ಸುಮ್ಮನಾಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕಾರ ಮಾಡದ ಹೊರತು ಈ ಸಮಸ್ಯೆಗಳಿಗೆ ಪರಿಹಾರವಿಲ್ಲ. ಎಐಸಿಸಿ ಅಧ್ಯಕ್ಷರು, ಸಚಿವ ಆರ್ ಬಿ. ತಿಮ್ಮಾಪುರ ಉಳಿದಂತೆ ಕೆಲ ನಾಯಕರು ಯಾವ ರೀತಿ ಹೇಳಿಕೆ ಕೊಟ್ಟಿದ್ರು ಎಂದು ರಾಜ್ಯದ ಜನ ನೋಡಿದ್ದಾರೆ ಎಂದ ಕಾರಜೋಳ ಕಾಂಗ್ರೆಸ್ ನಾಯಕರಿಗೆ ಮಾತಿನಲ್ಲೇ ತಿವಿದಿದ್ದಾರೆ.