Tuesday, May 19, 2026
Homeಟಾಪ್ ನ್ಯೂಸ್ದೊಡ್ಡವರ ಮಕ್ಕಳಿಗಿಲ್ಲ ಬಿಜೆಪಿ ಟಿಕೆಟ್ : ಹಲವರಿಗೆ ನಿರಾಸೆ

ದೊಡ್ಡವರ ಮಕ್ಕಳಿಗಿಲ್ಲ ಬಿಜೆಪಿ ಟಿಕೆಟ್ : ಹಲವರಿಗೆ ನಿರಾಸೆ

ನವದೆಹಲಿ: ಈ ಬಾರಿ ಚುನಾವಣೆಯಲ್ಲಿ ಶಾಸಕರು ಹಾಗೂ ಸಚಿವರ ಮಕ್ಕಳಿಗೆ ಟಿಕೆಟ್ ನಿರಾಕರಿಸಲಾಗಿದೆ. ಪರಿವಾರ ರಾಜಕಾರಣವನ್ನು ಟೀಕಿಸುತ್ತಾ ಬಂದಿರುವ ಬಿಜೆಪಿ ನಾಯಕರ ಮಕ್ಕಳಿಗೆ ಟಿಕೆಟ್‌ ನೀಡಿದರೆ ತೀವ್ರ ಮುಜುಗರ ಅನುಭವಿಸಬೇಕಾಗುತ್ತೆ ಎಂಬುದನ್ನು ಮನಗಂಡು ಈ ಬಾರಿ ನಾಯಕರ ಮಕ್ಕಳಿಗೆ ಟಿಕೆಟ್ ನಿರಾಕರಿಸಿದೆ.

ಸೋಮಣ್ಣ ಪುತ್ರ ಅರುಣ್‌ ಸೋಮಣ್ಣಗೆ ಗುಬ್ಬಿ ಕ್ಷೇತ್ರದಿಂದ ಟಿಕೆಟ್ ಕೊಡಿಸಬೇಕು ಎಂದು ಸೋಮಣ್ಣ ಇನ್ನಿಲ್ಲದ ಕಸರತ್ತು ಮಾಡಿದ್ದು ಯಾವುದೇ ಪ್ರಯೋಜನೆಕ್ಕೆ ಬಂದಿಲ್ಲ.

ಇತ್ತ ಗೋವಿಂದ್‌ ಕಾರಜೋಳ ಪುತ್ರ ಹಾಗೂ ಈಶ್ವರಪ್ಪ ಪುತ್ರ ಕಾಂತೇಶ್‌ ಗೂ ಬಿಜೆಪಿ ವರಿಷ್ಠರು ಟಿಕೆಟ್‌ ನಿರಾಕರಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಾರಿ ಶಿಕಾರಿಪುರ ಕ್ಷೇತ್ರದಿಂದ ಬಿಎಸ್‌ ಯಡಿಯೂರಪ್ಪ ಪುತ್ರ ವಿಜಯೇಂದ್ರ ಗೆ ಮಾತ್ರ ಟಿಕೆಟ್‌ ಪಕ್ಕಾ ಆಗಿದೆ ಎಂದು ತಿಳಿದುಬಂದಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!