Wednesday, August 19, 2026
Homeದೇಶಜ್ಞಾನವ್ಯಾಪಿ ಮಸೀದಿಯ ಅರ್ಜಿ ವಿಚಾರಣೆ ಎಪ್ರಿಲ್ 14ಕ್ಕೆ: ಅರ್ಜಿ ಸಲ್ಲಿಸಲು ಮುಸ್ಲಿಂ ಗುಂಪಿಗೆ ಅವಕಾಶ

ಜ್ಞಾನವ್ಯಾಪಿ ಮಸೀದಿಯ ಅರ್ಜಿ ವಿಚಾರಣೆ ಎಪ್ರಿಲ್ 14ಕ್ಕೆ: ಅರ್ಜಿ ಸಲ್ಲಿಸಲು ಮುಸ್ಲಿಂ ಗುಂಪಿಗೆ ಅವಕಾಶ

ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಪ್ರಕರಣವನ್ನು ಅರ್ಜಿ ವಿಚಾರಣೆಯಲ್ಲಿ ಏಪ್ರಿಲ್ 14 ರಂದು ನಡೆಸುವುದಾಗಿ ಹೇಳಿರುವ ಸುಪ್ರೀಂ ಕೋರ್ಟ್, ಮಸೀದಿ ಪರ ಇರುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

ಮಸೀದಿ ಆವರಣದೊಳಗೆ ಅಂಗಸ್ನಾನ ಮಾಡಲು ಅವಕಾಶ ನೀಡಬೇಕೆಂದು ಮುಸ್ಲಿಂ ಪರ ಗುಂಪು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಹಿರಿಯ ವಕೀಲ ಹುಝೆಫಾ ಅಹ್ಮದಿ, “ಇದು ರಮಝಾನ್ ತಿಂಗಳು ಮತ್ತು ಆರಾಧಕರು ಆವರಣದೊಳಗೆ ಪ್ರಾರ್ಥನೆ ಮಾಡಲು ಸಾಧ್ಯವಾಗಬೇಕು” ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಡಿವೈ ಚಂದ್ರಚೂಡ್ ಈ ಸಂಬಂಧ ಅರ್ಜಿ ಸಲ್ಲಿಸುವಂತೆ ಸೂಚಿಸಿದರು.

ಹೆಚ್ಚಿನ ಸುದ್ದಿ

Change Language »
error: Content is protected !!