Wednesday, May 14, 2025
Homeಕ್ರೀಡೆVIRAT KOHLI : ಕರ್ಮ ರಿಟರ್ನ್ಸ್ - ಆರ್‌ಸಿಬಿ ಕೆಣಕಿದ್ದ ಅಯ್ಯರ್ ಗೆ ಕೊಹ್ಲಿ ಸಖತ್...

VIRAT KOHLI : ಕರ್ಮ ರಿಟರ್ನ್ಸ್ – ಆರ್‌ಸಿಬಿ ಕೆಣಕಿದ್ದ ಅಯ್ಯರ್ ಗೆ ಕೊಹ್ಲಿ ಸಖತ್ ಗುನ್ನ! VIDEO

ಚಂಡೀಗಢ : ಸಾಮಾನ್ಯವಾಗಿ ಆರ್ ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಯಾರ ತಂಟೆಗೂ ಹೋಗಲ್ಲ, ಆದೇ ಅಪ್ಪಿ ತಪ್ಪಿ ತನ್ನ ಫ್ಯಾನ್ಸ್ ಅನ್ನು ಕೆಣಕಿದರೆ ಅದನ್ನು ವಾಪಸ್ ಕೊಡೋ ತನಕ ಸಮಾಧಾನವಿಲ್ಲ, ಅದು ಸ್ನೇಹಿತ ಇರಲಿ ಯಾರೇ ಆಗಲಿ ತಿರುಗಿಸಿ ಕೊಡ್ತಾ ಇರೋದೇ.. ಅದರಂತೆ ತವರಿನಲ್ಲಿ ಆರ್ ಸಿಬಿ ಅಭಿಮಾನಿಗಳನ್ನು ಕೆಣಕಿದ ಶ್ರೇಯಸ್ ಅಯ್ಯರ್ ಗೆ ಅವರ ತವರಿಗೆ ಹೋಗಿ ಮುಟ್ಟಿ ನೋಡಿಕೊಳ್ಳುವಂತೆ ಹೊಡೆದು ಬಂದಿದ್ದಾರೆ.

ಯಸ್.. ನಾರ್ಮಲ್ ಆಗಿ ಕರ್ಮ ರಿಟರ್ನ್ಸ್ ಎಂಬ ಮಾತಿಗೆ ಕೆಲವರು ಅದನ್ನು ನಂಬುತ್ತಾರೆ, ಇನ್ನ ಕೆಲವರು ನಂಬುವುದಿಲ್ಲ.. ಆದರೆ ನಮ್ಮ ಕಿಂಗ್ ಕೊಹ್ಲಿ ವಿಚಾರದಲ್ಲಿ ಬೇರೇನೇ ಫೀಲ್ಡ್ ನಲ್ಲಿ ಅಪ್ಪಿ ತಪ್ಪಿ  ಕೊಹ್ಲಿಯನ್ನು ಕೆಣಕಿದರೆ ಜಾಗ ಯಾವುದೇ ಇರಲಿ ಜನ ಯಾರೇ ಇರಲಿ ತಿರುಗಿಸಿ ಕೊಟ್ಟೆ ಸಿದ್ದ..

ಅದರಂತೆ ಏ.18 ರಂದು ಬೆಂಗಳೂರಿನಲ್ಲಿ ನಡೆದ ಆರ್ ಸಿಬಿ ಹಾಗೂ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಜತ್ ಪಡೆ ಸೋಲನುಭವಿಸಿತ್ತು. ಈ ವೇಳೆ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಆರ್ ಸಿಬಿ ಅಭಿಮಾನಿಗಳದ್ದು, ಸೌಂಡೇ ಇಲ್ಲ ಎಂದು ಕೆಣಕಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. 

ಅಷ್ಟೇ ಅಲ್ಲದೆ ಆರ್ ಸಿಬಿ ಅಭಿಮಾನಿಗಳು ಕರ್ಮ ರಿಟರ್ನ್ಸ್ ಎಂದು ಕಾಮೆಂಟ್ ಮಾಡಿದ್ದರು. ಇದೀಗ ನಿನ್ನೆ ಚಂಡೀಗಢದಲ್ಲಿ ನಡೆದ ಪಂಜಾಬ್ ವಿರುದ್ಧ ಎರಡನೇ ಪಂದ್ಯದಲ್ಲಿ ಆರ್ ಸಿಬಿ ಭರ್ಜರಿ ಜಯ ದಾಖಲಿಸುವ ಮೂಲಕ ತವರಿನಲ್ಲಿ ಪಂಜಾಬ್ ತಂಡವನ್ನು ಸೋಲಿಸಿತು. 

ಜೊತೆಗೆ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಪಾಯಿಂಟ್ ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ ಗೆ ಕಡೆಗೆ ತಿರುಗಿ ಉತ್ಸಾಹಭರಿತವಾಗಿ ನಿಮ್ಮ ವಿರುದ್ಧ ನಿಮ್ಮದೇ ನೆಲದಲ್ಲಿ ಗೆದ್ದಿದ್ದೇವೆ ಎನ್ನುವಂತೆ ಸನ್ನಿ ಮೂಲಕ ಸಂಭ್ರಮಿಸಿದರು. ಜೊತೆಗೆ ಮೊದಲ ಪಂದ್ಯದ ಸೋಲನ್ನು ತೀರಿಸಿಕೊಂಡರು.

ಆರ್ ಸಿಬಿ ಗೆಲ್ಲುತ್ತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಕುಣಿಯಲು ಆರಂಭಿಸಿದರು. ಇದರಿಂದ ಕೆರಳಿದ ಪಂಜಾಬ್ ನಾಯಕ, ವಿರಾಟ್‌ ಕೊಹ್ಲಿ ಅವರ ವರ್ತನೆಯನ್ನು ಪ್ರಶ್ನೆ ಮಾಡಿದರು. ಈ ವೇಳೆ ಮೈದಾನದಲ್ಲೇ ಕೆಲಕಾಲ ಇಬ್ಬರೂ ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೆಚ್ಚಿನ ಸುದ್ದಿ

error: Content is protected !!