ತೆಲುಗು ಚಿತ್ರರಂಗದ ಸೆನ್ಸೇಷನ್ ರಾಮ್ಚರಣ್ ತೇಜಾ ಇಂದು ಕೇಂದ್ರ ಗೃಹಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ್ರು. ಆರ್ಆರ್ಆರ್ ಸಿನಿಮಾ ದ ನಾಟು ನಾಟು ಹಾಡಿಗೆ ಆಸ್ಕರ್ ಲಭಿಸಿದ ನಂತರ ದೇಶದೆಲ್ಲೆಡೆ ಅವರ ಅಭಿಮಾನಿಗಳು ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಗೆ ಉಧೋ ಉಧೋ ಎಂದಿತ್ತು.
ಇಂದು ಅಮಿತ್ ಶಾ ಕೂಡಾ ರಾಮ್ ಚರಣ್ ಗೆ ಸನ್ಮಾನ ಮಾಡಿ ಶುಭಹಾರೈಸಿದ್ದಾರೆ. ಈ ವೇಳೆ ಮೆಗಾಸ್ಟಾರ್ ಚಿರಂಜೀವಿ ಕೂಡಾ ರಾಮ್ ಚರಣ್ ಜೊತೆಯಾಗಿದ್ರು. ಇದನ್ನು ಚಿರಂಜೀವಿ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.