ಪಂಜಾಬ್ : ಮಾಜಿ ಸಿಎಂ ಏಕನಾಥ್ ಶಿಂಧೆ ಶಿವಸೇನೆ ಬಣದ ಮೋಗಾ ಜಿಲ್ಲಾ ಘಟಕದ ಅಧ್ಯಕ್ಷ ಮಂಗತ್ ರಾಯ್ ಮಾಂಗಾ ಎಂಬುವವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.
ಮೋಗಾ ನಗರದಲ್ಲಿ ಮಂಗತ್ ಅವರು ಹಾಲು ಖರೀದಿಸಲೆಂದ ಬೈಕ್ ಮೇಲೆ ಆಗಮಿಸಿದ್ದಾಗ ನಿನ್ನೆ ರಾತ್ರಿ 10 ಸುಮಾರಿಗೆ ಹಂತಕರು ಹಿಂಬಾಲಿಸಿ ಬಂದಿದ್ದಾರೆ. ಶೂಟ್ ಮಾಡುವಾಗ ಗುರಿತಪ್ಪಿ ಸಮೀಪದಲ್ಲಿದ್ದ 11 ವರ್ಷದ ಬಾಲಕನಿಗೆ ಗುಂಡು ತಾಕಿದೆ.
Shiv Sena leader Mangat Rai Manga, was shot dead by some assailants in Punjab's Moga district on the intervening night of March 13 and 14 during Holi celebrations. More details awaited. Visuals from outside the district hospital. #Punjab #Crime #Violence #ShootOut #Moga pic.twitter.com/SNHe9vinZR
— Lokmat Times Nagpur (@LokmatTimes_ngp) March 14, 2025
ಕೂಡಲೇ ಮಂಗತ್ ಅಲ್ಲಿಂದ ಎಸ್ಕೇಪ್ ಆಗುವಾಗ ಮತ್ತೆ ಹಿಂಬಾಲಿಸಿದ ದುಷ್ಕರ್ಮಿಗಳು, ಶೂಟ್ ಮಾಡಿ ಪರಾರಿಯಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಮಂಗತ್ ಅಸುನೀಗಿದ್ದು, ಗಾಯಾಳು ಬಾಲಕನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅತ್ತ ಹತ್ಯೆ ಖಂಡಿಸಿ ಮಂಗಾತ್ ಬೆಂಬಲಿಗರು ತೀವ್ರ ಪ್ರತಿಭಟನೆಯನ್ನು ಜಿಲ್ಲೆಯಾದ್ಯಂತ ಕೈಗೊಂಡಿದ್ದಾರೆ.