ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆಯಾಗುವ ಎಲ್ಲಾ ಸಾಧ್ಯತೆಗಳಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಚುನಾವಣಾ ಸಮಿತಿ ಸಭೆಯು ನಡೆಯಲಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಡಿಸಿಎಂ ಜಿ. ಪರಮೇಶ್ವರ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಒಂದೆಡೆ ಇಂದೇ ಲಿಸ್ಟ್ ರಿಲೀಸ್ ಆಗುತ್ತೆ ಎನ್ನಲಾಗುತ್ತಿದ್ದು, ಇನ್ನೊಂದೆಡೆ ಮಾರ್ಚ್ 20 ರಂದು ಆಗಮಿಸಲಿರುವ ರಾಹುಲ್ ಗಾಂಧಿ ಪಟ್ಟಿಯ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂಬ ಮಾತುಗಳೂ ಇದೆ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದ್ದು ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದು ಪಕ್ಕಾ ಎನ್ನಲಾಗ್ತಿದೆ. ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
ಕೋಲಾರ – ಸಿದ್ದರಾಮಯ್ಯ
ಕನಕಪುರ – ಡಿ.ಕೆ.ಶಿವಕುಮಾರ್
ಕಡೂರು – ವೈಎಸ್ವಿ ದತ್ತ
ನಂಜನಗೂಡು – ದರ್ಶನ ಧೃವನಾರಾಯಣ್
ಹೊಸಕೋಟೆ – ಶರತ್ ಬಚ್ಚೇಗೌಡ
ಭಟ್ಕಳ – ಮಂಕಾಳ ವೈದ್ಯ
ಬೈಂದೂರು – ಗೋಪಾಲ್ ಪೂಜಾರಿ
ಕಾಪು – ವಿನಯ್ ಕುಮಾರ್ ಸೊರಕೆ
ಬಸವನಗುಡಿ – ಯುಬಿ ವೆಂಕಟೇಶ್
ಮಾಗಡಿ – ಬಾಲಕೃಷ್ಣ
ಹಿರೇಕೆರೂರು – ಯುಬಿ ಬಣಕಾರ್
ವಿರಾಜಪೇಟೆ – ಪೊನ್ನಣ್ಣ
ರಾಮನಗರ – ಇಕ್ಬಾಲ್ ಹುಸೇನ್
ಚಿಂತಾಮಣಿ – ಎಂಸಿ ಸುಧಾಕರ್
ಚಿಕ್ಕಬಳ್ಳಾಪುರ – ಕೊತ್ತೂರ್ ಮಂಜುನಾಥ್
ಸೊರಬ – ಮಧು ಬಂಗಾರಪ್ಪ,
ಚಿತ್ರದುರ್ಗ – ವೀರೇಂದ್ರ ಪಪ್ಪಿ
ಗೋಕಾಕ್ – ಅಶೋಕ್ ಪೂಜಾರಿ
ಹುನಗುಂದ – ವಿಜಯಾನಂದ ಕಾಶಪ್ಪನವರ್
ಮುದ್ದೇಬಿಹಾಳ – ಸಿ.ಎಸ್ ನಾಡಗೌಡ
ಕನಕಗಿರಿ – ಶಿವರಾಜ್ ತಂಗಡಗಿ
ರಾಯಚೂರು – ಎನ್.ಎಸ್ ಬೋಸರಾಜ್
ಯಲಬುರ್ಗಾ – ಬಸವರಾಜ್ ರಾಯರೆಡ್ಡಿ
ಕಾರವಾರ – ಸತೀಶ್ ಸೈಲ್
ಹಾನಗಲ್ – ಶ್ರೀನಿವಾಸ್ ಮಾನೆ
ಹಿರಿಯೂರು -ಸುಧಾಕರ್
ವಿರಾಜಪೇಟೆ – ಪೊನ್ನಣ್ಣ
ನಿಪ್ಪಾಣಿ – ಕಾಕಾಸಾಹೇಬ್ ಪಾಟೀಲ್
ಟಿ. ನರಸಿಪುರ – ಸುನಿಲ್ ಬೋಸ್
ಹುಕ್ಕೇರಿ – ಎ.ಬಿ ಪಾಟೀಲ್
ಕೆಲ ಕ್ಷೇತ್ರಗಳಲ್ಲಿ ಸಿಂಗಲ್ ಹೆಸರು ಫೈನಲ್ ಆಗಿದ್ರೆ ಇನ್ನು ಕೆಲವೆಡೆ ಇಬ್ಬರ ಹೆಸರು ಕೇಳಿಬಂದಿದೆ. ಇಬ್ಬರಲ್ಲಿ ಯಾರು ಉತ್ತಮರೆಂದು ಪಕ್ಷ ನಿರ್ಧರಿಸಿ ಟಿಕೆಟ್ ಘೋಷಿಸಲಿದೆ.
ರಾಜಾಜಿನಗರ – ಪುಟ್ಟಣ್ಣ/ ಭವ್ಯ ನರಸಿಂಹಮೂರ್ತಿ
ಗಂಗಾವತಿ – ಇಕ್ಬಾಲ್ ಅನ್ಸಾರಿ / ಎಚ್.ಆರ್ ಶ್ರೀನಾಥ್
ಕಲಘಟಗಿ – ಸಂತೋಷ್ ಲಾಡ್ / ನಾಗರಾಜ್ ಚಬ್ಬಿ
ಶಿಗ್ಗಾಂವಿ – ಅಜಂಪೀರ್ ಖಾದ್ರಿ/ ಸೋಮಣ್ಣ ಬೇವಿನಮರದ
ಬಾಗಲಕೋಟ – ಎಚ್ ವೈ ಮೇಟಿ / ದೇವರಾಜ್ ಪಾಟೀಲ್
ಹೊಳಲ್ಕೆರೆ – ಸವಿತಾ ರಘು / ಆಂಜನೇಯ
ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್ / ಮಂಜುನಾಥ್ ಗೌಡ
ಬಳ್ಳಾರಿ ಸಿಟಿ – ಅಲ್ಲಂ ಪ್ರಶಾಂತ್ / ಅನಿಲ್ ಲಾಡ್
ಮಂಗಳೂರು ದಕ್ಷಿಣ – ಐವಾನ್ ಡಿಸೋಜಾ / ಜೆ ಆರ್ ಲೋಬೋ
ಬೆಳಗಾವಿ ಉತ್ತರ – ಫೀರೋಜ್ ಸೇಠ್ / ಆಸೀಫ್ ಸೇಠ್
ಕುಂದಗೋಳ – ಕುಸುಮಾ ಶಿವಳ್ಳಿ/ ಚಂದ್ರಶೇಖರ್ ಜತ್ತಲ್
ಕುಡಚಿ – ಶ್ಯಾಮ್ ಭೀಮ್ ಘಾಟ್ಗೆ / ಮಹೇಂದ್ರ ತಮ್ಮಣ್ಣ
ಕಾಗವಾಡ – ರಾಜೂ ಕಾಗೆ / ದಿಗ್ವಿಜಯ್ ದೇಸಾಯಿ
ಚಾಮುಂಡೇಶ್ವರಿ – ಮರಿಗೌಡ / ಚಂದ್ರಶೇಖರ್
ಬೆಳ್ತಂಗಡಿ – ರಕ್ಷಿತ್ / ಶಿವರಾಂ
ಬೆಂಗಳೂರು ದಕ್ಷಿಣ – ಆರ್ ಕೆ ರಮೇಶ್ / ಸುಷ್ಮಾ ರಾಜಗೋಪಾಲ್
ಪಾವಗಡ – ವೆಂಕಟರಮಣಪ್ಪ / ಶಾಸಕ ಎಚ್.ವಿ ವೆಂಕಟೇಶ್
ದಾಸರಹಳ್ಳಿ- ಕೃಷ್ಣಮೂರ್ತಿ / ಸಿ.ಎಂ ಧನಂಜಯ
ಕಲಬುರಗಿ ಗ್ರಾಮೀಣ – ರೇವುನಾಯಕ ಬೆಳಮಗಿ / ವಿಜಯಕುಮಾರ್
ಲಿಂಗಸುಗೂರು – ಡಿಎಸ್ ಹೂಲಗೇರಿ / ರುದ್ರಯ್ಯ
ಬೆಳಗಾವಿ ಉತ್ತರ – ಫೀರೋಜ್ ಸೇಠ್ / ಆಸೀಫ್ ಸೇಠ್
ತೇರದಾಳ್ – ಉಮಾಶ್ರೀ / ಮಲ್ಲೇಶಪ್ಪ
ದೊಡ್ಡಬಳ್ಳಾಪುರ – ವೆಂಕಟರಮಣಯ್ಯ / ಶಾಸಕ ಬಿಸಿ ಆನಂದ್
ಅಥಣಿ – ಗಜಾನನ್ ಮಂಗಸೂಳಿ / ಶ್ರೀಕಾಂತ್ ಪೂಜಾರಿ