Monday, May 18, 2026
Homeಟಾಪ್ ನ್ಯೂಸ್ಸುದೀಪ್‌ ನಡೆಗೆ ಆಘಾತ ವ್ಯಕ್ತಪಡಿಸಿದ ಪ್ರಕಾಶ್‌ ರಾಜ್

ಸುದೀಪ್‌ ನಡೆಗೆ ಆಘಾತ ವ್ಯಕ್ತಪಡಿಸಿದ ಪ್ರಕಾಶ್‌ ರಾಜ್

  ಕಿಚ್ಚ ಸುದೀಪ್ ಅವರು ಬಿಜೆಪಿ ಪರ ಪ್ರಚಾರ ಮಾಡುವುದಕ್ಕೆ ನಟ ಪ್ರಕಾಶ್‌ ರಾಜ್‌ ಆಘಾತ ವ್ಯಕ್ತಪಡಿಸಿದ್ದಾರೆ.

ಸುದೀಪ್ ಹೇಳಿಕೆಗೆ ಆಘಾತ ವ್ಯಕ್ತಪಡಿಸಿರುವ ಪ್ರಕಾಶ್‌ ರಾಜ್‌, ಇದರಿಂದ ನನಗೆ ನೋವಾಗಿದೆ ಎಂದು ಹೇಳಿದ್ದಾರೆ.

 ಸುದೀಪ್‌ ಬಿಜೆಪಿಗೆ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಾಗ, ಆ ಸುದ್ದಿಯನ್ನು ಪ್ರಕಾಶ್‌ ರಾಜ್‌ ನಿರಾಕರಿಸಿದ್ದರು. ಇದೊಂದು ನಕಲಿ ಸುದ್ದಿ, ಸುದೀಪ್‌ ಬಗ್ಗೆ ನನಗೆ ಗೊತ್ತು, ಅವರು ತಮ್ಮನ್ನು ತಾವು ಮಾರಿಕೊಳ್ಳುವವರಲ್ಲ ಎಂದು ಹೇಳಿದ್ದರು.

 ಅದಾಗ್ಯೂ, ನಂತರದ ಬೆಳವಣಿಗೆಯಲ್ಲಿ ಸ್ವತಃ ಸುದೀಪ್‌ ಅವರೇ ತಾನು ಬಸವರಾಜ್‌ ಪರ ಪ್ರಚಾರ ನೀಡುವುದಾಗಿ, ಅವರಿಗೆ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದ್ದರು.

ಹೆಚ್ಚಿನ ಸುದ್ದಿ

Change Language »
error: Content is protected !!