ಬೆಂಗಳೂರು : ಅತ್ಯಾಚಾರ, ಸಾಮೂಹಿಕ ಲೈಂಗಿಕ ಹಗರಣ ಮತ್ತಿತರ ಪ್ರಕರಣಗಳಲ್ಲಿ ಆರೋಪಿಯಾಗಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೆ ಕೋರ್ಟ್ ನಿರಾಶೆಯ ಸುದ್ದಿ ನೀಡಿದೆ. ಜಾಮೀನು ಕೋರಿ ಸಲ್ಲಿಸಿದ್ದ ಪ್ರಜ್ವಲ್ ರೇವಣ್ಣ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ಪ್ರಜ್ವಲ್ ರೇವಣ್ಣ ಅರ್ಜಿ ವಿಚಾರಣೆಯನ್ನು ಪರಿಶೀಲಿಸಿದ ನ್ಯಾ. ಎಸ್. ಆರ್. ಕೃಷ್ಣ ಕುಮಾರ್ ಪೀಠವು ವಿಚಾರಣೆಯನ್ನು ಜೂ.24 ಕ್ಕೆ ಮುಂದೂಡಿದೆ.
ವಕೀಲ ಪ್ರಭುಲಿಂಗ ನಾವದಗಿ ಅವರು ಪ್ರಜ್ವಲ್ ರೇವಣ್ಣ ಪರವಾಗಿ ವಾದಿಸಿದರು.